ADVERTISEMENT

ವಿದ್ಯಾರ್ಥಿ, ಕುಟುಂಬದವರಿಗೆ ಥಳಿತ: ಶಾಲಾ ಶಿಕ್ಷಕನ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 16:06 IST
Last Updated 3 ಜುಲೈ 2024, 16:06 IST

ಹುಮನಾಬಾದ್‌ (ಬೀದರ್‌ ಜಿಲ್ಲೆ): ಏಳನೇ ತರಗತಿಯ ವಿದ್ಯಾರ್ಥಿ ಹಾಗೂ ಅವರ ಕುಟುಂಬದ ಸದಸ್ಯರನ್ನು ಮನಬಂದಂತೆ ಥಳಿಸಿದ ಶಾಲಾ ಶಿಕ್ಷಕ ಸಾಹೇಬ್‌ ಗೌಡ ಅವರ ವಿರುದ್ಧ ತಾಲ್ಲೂಕಿನ ಹಳ್ಳಿಖೇಡ್‌ (ಬಿ) ಪೊಲೀಸ್‌ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.

ಹಳ್ಳಿಖೇಡ್‌ ಗ್ರಾಮದ ‘ಎಕ್ಸಲೆಂಟ್‌’ ರೆಸಿಡೆನ್ಶಿಯಲ್‌ ಶಾಲೆಯ ವಿದ್ಯಾರ್ಥಿ ಪವನ್‌ ಜೂನ್‌ 30ರಂದು ಶಿಕ್ಷಕ ಸಾಹೇಬ್‌ ಗೌಡ ಅವರಿಗೆ ಹಾಲು ಕೊಡಲು ಅವರ ಮನೆಯ ಮಹಡಿಯೊಳಗೆ ಹೋಗಿದ್ದ. ಇದರಿಂದ ಕೋಪಗೊಂಡ ಸಾಹೇಬ್‌ ಗೌಡ, ಪವನ್‌ಗೆ ಮನಬಂದಂತೆ ಥಳಿಸಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ. ಇದನ್ನು ಪ್ರಶ್ನಿಸಲು ಜುಲೈ 1ರಂದು ಸಾಹೇಬ್‌ ಗೌಡ ಬಳಿ ಪವನ್‌ ತಂದೆ ಮಲ್ಲಿಕಾರ್ಜುನ, ಅಜ್ಜಿ ಮಲ್ಲಮ್ಮ ಹಾಗೂ ಸಹೋದರಿ ಮಧುಪ್ರಿಯಾ ಹೋಗಿದ್ದರು. ಇದರಿಂದ ಮತ್ತಷ್ಟು ಕೋಪಗೊಂಡ ಸಾಹೇಬ್‌ ಗೌಡ ಕೆಲವು ಜನರನ್ನು ಸ್ಥಳಕ್ಕೆ ಕರೆಸಿಕೊಂಡು ಮೂವರಿಗೆ ಬಡಿಗೆಗಳಿಂದ ಹೊಡೆದು ಗಾಯಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT