ADVERTISEMENT

ಬೀದರ್‌: ರಾಮ ಮಂದಿರ ಮಂತ್ರಾಕ್ಷತೆ ವಿತರಿಸಿದ ಕೇಂದ್ರ ಸಚಿವ ಭಗವಂತ ಖೂಬಾ

​ಪ್ರಜಾವಾಣಿ ವಾರ್ತೆ
Published 15 ಜನವರಿ 2024, 6:53 IST
Last Updated 15 ಜನವರಿ 2024, 6:53 IST
ಕೇಂದ್ರ ರಾಸಾಯನಿಕ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ಬೀದರ್‌ನ ಶಿವನಗರದಲ್ಲಿ ಭಾನುವಾರ ಅಯೋಧ್ಯೆ ರಾಮ ಮಂದಿರದ ಮಂತ್ರಾಕ್ಷತೆಯನ್ನು ವಿತರಿಸಿದರು
ಕೇಂದ್ರ ರಾಸಾಯನಿಕ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ಬೀದರ್‌ನ ಶಿವನಗರದಲ್ಲಿ ಭಾನುವಾರ ಅಯೋಧ್ಯೆ ರಾಮ ಮಂದಿರದ ಮಂತ್ರಾಕ್ಷತೆಯನ್ನು ವಿತರಿಸಿದರು   

ಬೀದರ್‌: ಕೇಂದ್ರ ರಾಸಾಯನಿಕ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ನಗರದಲ್ಲಿ ಭಾನುವಾರ ಅಯೋಧ್ಯೆ ರಾಮ ಮಂದಿರದ ಮಂತ್ರಾಕ್ಷತೆಯನ್ನು ಮನೆ, ಮನೆಗಳಿಗೆ ತೆರಳಿ ವಿತರಿಸಿದರು.

ಅಯೋಧ್ಯೆಯಲ್ಲಿ ಜ.22ರಂದು ರಾಮ ಮಂದಿರದ ಉದ್ಘಾಟನೆ ನಡೆಯಲಿದ್ದು, ಅದರ ಅಂಗವಾಗಿ ಕೇಂದ್ರ ಸಚಿವರು ಇಲ್ಲಿನ ಶಿವನಗರದಲ್ಲಿ ಮಂತ್ರಾಕ್ಷತೆ ವಿತರಿಸಿದರು.

‘ಜ.22ರಂದು ಮಂದಿರದ ಉದ್ಘಾಟನೆ ಸಂದರ್ಭದಲ್ಲಿ ಪ್ರತಿಯೊಬ್ಬರೂ ಮನೆಗಳಲ್ಲಿ ದೀಪಗಳನ್ನು ಬೆಳಗಿಸಿ ದೀಪಾವಳಿ ಹಬ್ಬದಂತೆ ಆಚರಿಸಬೇಕು. ಇತರರಿಗೂ ಈ ಕೆಲಸ ಮಾಡುವಂತೆ ಪ್ರೇರೇಪಿಸಬೇಕು. ಎಲ್ಲರೂ ರಾಮನ ಆದರ್ಶಗಳನ್ನು ಅಳವಡಿಸಿಕೊಳ್ಳೋಣ. ಕೇಡು ಬಯಸುವವರಿಗೂ ಒಳ್ಳೆಯದನ್ನೇ ಬಯಸೋಣ’ ಎಂದು ಖೂಬಾ ಹೇಳಿದರು.

ADVERTISEMENT

ಸಚಿವರ ಪತ್ನಿ ಶೀಲಾ ಖೂಬಾ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಲಬುರಗಿ ವಿಭಾಗದ ಸಂಚಾಲಕ ಹಣಮಂತರಾವ ಪಾಟೀಲ, ಜಿಲ್ಲಾ ಸಂಘ ಚಾಲಕ ಶಿವರಾಜ ಹಲಶೆಟ್ಟಿ, ಬೀದರ್‌ ನಗರ ಕಾರ್ಯವಾಹ ಶಿವಕುಮಾರ ಕುಂಬಾರ, ಪ್ರಮುಖರಾದ ದತ್ತು ತುಪ್ಪದ, ಮಾರುತಿ ಶೇರಿಕಾರ, ದಿನೇಶ ಮೂಲಗೆ, ಮಹೇಶ ಪಾಟೀಲ, ಶಂಕರರಾವ ಬಿರಾದಾರ ಇತರರು ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.