ADVERTISEMENT

ವಯನಾಡು ಗುಡ್ಡ ಕುಸಿತ: ಚಾಮರಾಜನಗರದ ದಂಪತಿ ನಾಪತ್ತೆ

Pavitra Bhat
Published 30 ಜುಲೈ 2024, 15:27 IST
Last Updated 30 ಜುಲೈ 2024, 15:27 IST
<div class="paragraphs"><p>ವಯನಾಡಿನಲ್ಲಿ ಪ್ರವಾಹದಿಂದಾದ ಸ್ಥಿತಿ</p></div>

ವಯನಾಡಿನಲ್ಲಿ ಪ್ರವಾಹದಿಂದಾದ ಸ್ಥಿತಿ

   

ಪಿಟಿಐ ಚಿತ್ರ

ಚಾಮರಾಜನಗರ: ಕೇರಳದ ವಯನಾಡಿನಲ್ಲಿರುವ ಟೀ ಎಸ್ಟೇಟ್‌ನಲ್ಲಿ ಕೆಲಸಕ್ಕೆ ತೆರಳಿದ್ದ ಚಾಮರಾಜನಗರ ತಾಲ್ಲೂಕಿನ ನಾಗವಳ್ಳಿ ಗ್ರಾಮದ ರತ್ನಮ್ಮ (45) ಹಾಗೂ ರಾಜೇಂದ್ರ (55) ದಂಪತಿ ನಾಪತ್ತೆಯಾಗಿದ್ದಾರೆ.

ADVERTISEMENT

ದಂಪತಿ ನಾಪತ್ತೆಯಾಗಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದ್ದು ಜಿಲ್ಲಾಡಳಿತ ಮಾಹಿತಿ ಕಲೆ ಹಾಕುತ್ತಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ತಿಳಿಸಿದ್ದಾರೆ.

ಪತಿಯ ರಕ್ಷಣೆಗೆ ಮೊರೆ:

ಚಾಮರಾಜನಗರದ ಉಪ್ಪಾರ ಬೀದಿಯ ಪ್ರವೀದಾ ಅವರ ಪತಿ ವಿನೋದ್‌ ಭೂಕುಸಿತ ಸಂಭವಿಸಿರುವ ಚೂರಲ್‌ಮಲೆಯ ಭಾಗದಲ್ಲಿ ಸಿಲುಕಿದ್ದಾರೆ. ಪತಿ ಫೋನ್ ಸಂಪರ್ಕಕ್ಕೆ ಸಿಕ್ಕಿದ್ದು ಸುರಕ್ಷಿತವಾಗಿದ್ದಾರೆ, ಗುಡ್ಡಕುಸಿತ ಜಾಗದಲ್ಲಿ ಸಿಲುಕಿರುವ ಪತಿಯನ್ನು ರಕ್ಷಿಸಿ ಕರೆತರಬೇಕು ಎಂದು ಪ್ರವೀದಾ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.