ಚಾಮರಾಜನಗರ: ತಾಲ್ಲೂಕಿನ ಗೂಳಿಪುರ ಗ್ರಾಮದ ಸಮೀಪ ಇತ್ತೀಚೆಗೆ ಜಮೀನಿನ ಮಧ್ಯೆ ಹಾದು ಹೋಗಿದ್ದ ವಿದ್ಯುತ್ ತಂತಿಯಲ್ಲಿ ಶಾರ್ಟ್ ಸರ್ಕಿಟ್ ಉಂಟಾಗಿ ಒಂದು ಎಕರೆ ಕಬ್ಬಿನ ಫಸಲು ಸುಟ್ಟು ಹೋಗಿದೆ.
ತಾಲ್ಲೂಕಿನ ಎಚ್. ಮೂಕಹಳ್ಳಿ ಗ್ರಾಮದ ನಿವಾಸಿ ರಾಜಮ್ಮ ಅವರಿಗೆ ಸೇರಿದ ಜಮೀನಿನಲ್ಲಿ ಈ ಅವಘಡ ನಡೆದಿದೆ. ಗೂಳಿಪುರ ಎಲ್ಲೆಗೆ ಸೇರಿದ ಸರ್ವೆ ನಂಬರ್ 22/6ರ ಒಂದು ಎಕರೆ ಪ್ರದೇಶದಲ್ಲಿ ಬೇಸಿಗೆಯ ನಡುವೆ ಕಬ್ಬು ಬೆಳೆದಿದ್ದರು.
ಶಾರ್ಟ್ ಸರ್ಕಿಟ್ನಿಂದಾಘಿ ಜಮೀನಿನಲ್ಲಿದ್ದ 40 ತೆಂಗಿನ ಮರ, ನಾಲ್ಕು ತೇಗದ ಮರ, ಡ್ರಿಪ್ ಪೈಪ್, ಕೊಳವೆ ಬಾವಿಗೆ ಅಳವಡಿಸಿದರು ಕೇಬಲ್, ಪೈಪ್, ಹನಿನೀರಾವರಿ ಫಿಲ್ಟರ್ ಸಹ ಸುಟ್ಟು ಹೋಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಸೆಸ್ಕ್ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು ಎಂದು ನೊಂದ ರೈತ ಮಹಿಳೆ ರಾಜಮ್ಮ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.