ADVERTISEMENT

ಚಿನ್ನ ಪಾಲಿಶ್ ನೆಪ: ಆಭರಣ ಕಳ್ಳರ ಬಂಧನ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 16:55 IST
Last Updated 26 ಜುಲೈ 2024, 16:55 IST

ಸಂತೇಮರಹಳ್ಳಿ: ಚಿನ್ನದ ಸರ ಪಾಲಿಶ್ ಮಾಡುವ ನೆಪದಲ್ಲಿ ಆಭರಣ ಕಳವು ಮಾಡುತ್ತಿದ್ದವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಚುಂಗಡಿಪುರ ಗ್ರಾಮದಲ್ಲಿ ಐವರ ತಂಡ ಚಿನ್ನದ ಸರ ಪಾಲಿಶ್ ಮಾಡುತ್ತಿದ್ದ ವೇಳೆ ಸರಗಳ ಕಡಿಮೆ ತೂಕ ಕಂಡು ಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದರು. ನಂತರ ಸಂತೇಮರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದರು.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಿಹಾರ ಮೂಲದ ಬಿಕ್ರಂ, ಮನೀಷ್, ಬಬ್ಲು ಕುಮಾರ್, ಕನ್ನಯ್ಯಕುಮಾರ್ ಹಾಗೂ ಕುಂದನ್ ಕುಮಾರ್ ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT