ಹನೂರು: ಅಂಬಿಕಾಪುರ ಗ್ರಾಮದಲ್ಲಿ ಗುರುವಾರ ಆಕಸ್ಮಿಕ ಬೆಂಕಿ ತಗುಲಿ ರೇಷ್ಮೆ ಹುಳು ಸಾಕಣೆ ಘಟಕ ಸಂಪೂರ್ಣ ಭಸ್ಮವಾಗಿದೆ
ರೇಷ್ಮೆ ಬೆಳೆಗಾರ ಅರುಣ್ ಕುಮಾರ್ ಎಂಬವರು ಜಮೀನಿನಲ್ಲಿ ರೇಷ್ಮೆ ಹುಳು ಸಾಕಣೆ ಘಟಕ ನಿರ್ಮಾಣ ಮಾಡಿದ್ದರು . ಆಕಸ್ಮಿಕ ಬೆಂಕಿಗೆ ರೇಷ್ಮೆ ಹುಳು, ಚಂದ್ರಿಕೆಗಳು, ಕಟ್ಟಿಗೆಯ ರ್ಯಾಕ್, ಪರಿಕರಕಗಳು ಸುಟ್ಟು ಹೋಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ನಷ್ಟವಾಗಿದೆ.
ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ರೇಷ್ಮೆ ಕೃಷಿ ಪರಿಕರಗಳನ್ನು ಖರೀದಿಸಿ, ಸಂಗ್ರಹಿಸಿಟ್ಟಿದ್ದೆ, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿ , ಸಂಕಷ್ಟಕ್ಕೆ ಸಿಲುಕಿ ಪರದಾಡುವಂಥ ಸ್ಥಿತಿ ನಿರ್ಮಾಣವಾಗಿದೆ. ರೈತ ಅರುಣ್ಗೆ ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ನೆರವು ನೀಡಬೇಕು ಎಂದು ರೈತ ಸಂಘಟನೆ ಒತ್ತಾಯಿಸಿದೆ.
ರಾಮಾಪುರ ಪೋಲಿಸ್ ಠಾಣೆ ಎಎಸ್ಐ ಲಿಂಗರಾಜು ಹಾಗೂ ಕಾನ್ಸ್ಟೆಬಲ್ ಮಹೇಂದ್ರ ಪರಿಶೀಲಿಸಿ, ಪ್ರಕರಣ ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.