ADVERTISEMENT

ಗುಂಡ್ಲುಪೇಟೆ | ಬಿಸಿಎಂ ಹಾಸ್ಟೆಲ್‌‌‌‌ನಲ್ಲಿ ನೌಕರ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2024, 14:04 IST
Last Updated 14 ಅಕ್ಟೋಬರ್ 2024, 14:04 IST
ಪ್ರಮೋದ್ ಕುಮಾರ್
ಪ್ರಮೋದ್ ಕುಮಾರ್   

ಗುಂಡ್ಲುಪೇಟೆ: ತಾಲ್ಲೂಕಿನ ಬೇಗೂರು ಗ್ರಾಮದ ಬಿಸಿಎಂ ವಿದ್ಯಾರ್ಥಿ ನಿಲಯದಲ್ಲಿ ಭಾನುವಾರ ಅಡುಗೆ ಮೇಲ್ವಿಚಾರಕ ಫ್ಯಾನ್‌‌‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾರೆ.

ಚಾಮರಾಜನಗರ ತಾಲ್ಲೂಕಿನ ಸಾಗಡೆ ಗ್ರಾಮದ ಪ್ರಮೋದ್ ಕುಮಾರ್(29) ಮೃತ ವ್ಯಕ್ತಿ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಬೇಗೂರು ಠಾಣೆ ಪೊಲೀಸರು ಭೇಟಿ ನೀಡಿ ನೇತಾಡುತ್ತಿದ್ದ ಮೃತ ದೇಹ ಕೆಳಗಿಳಿಸಿ, ನಂತರ ಸಮೀಪದ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿ, ಮುಂದಿನ ಕ್ರಮ ಕೈಗೊಂಡರು.

ತನಿಖೆಗೆ ಆಗ್ರಹ:  ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಸಮಗ್ರ ತನಿಖೆಗೆ ತಾಲ್ಲೂಕು ದಲಿತ ಸಂಘರ್ಷ ಸಮಿತಿ(ದಸಂಸ) ಆಗ್ರಹಿಸಿದೆ.

ADVERTISEMENT

 ಈ ಬಗ್ಗೆ ನಿಲಯ ಪಾಲಕ ರಂಗಸ್ವಾಮಿ ಅವರನ್ನು ಪ್ರಶ್ನೆ ಮಾಡಿದರೆ ರಜೆ ಮೇಲೆ ಊರಿಗೆ ತೆರಳಿದ್ದೆ ಎಂದು  ಉತ್ತರ ನೀಡುತ್ತಿದ್ದಾರೆ. ಈತ ಆತ್ಮಹತ್ಯೆ ಮಾಡಿಕೊಂಡಿರುವ ಸಂಬಂಧ ಗೊಂದಲಗಳಿದ್ದು, ಯಾವುದೇ ನಿಖರ ಕಾರಣ ತಿಳಿದು ಬರುತ್ತಿಲ್ಲ. ಆದ್ದರಿಂದ ಆತನ ಮೊಬೈಲ್ ಪರಿಶೀಲನೆ ನಡೆಸಿ ಸೂಕ್ತ ತನಿಖೆ ನಡೆಸಬೇಕೆಂದು ತಾಲ್ಲೂಕು ದಸಂಸ ಸಂಚಾಲಕ ರಂಗಸ್ವಾಮಿ ಮಾಡ್ರಹಳ್ಳಿ, ಜಿಲ್ಲಾ ದಸಂಸ ಸಂಚಾಲಕ ನಂಜುಂಡಸ್ವಾಮಿ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.