ADVERTISEMENT

ಚಾಮರಾಜನಗರ: ಸಿವಿಲ್ ನ್ಯಾಯಾಧೀಶರಾಗಿ ಮಧುಶ್ರೀ ಆಯ್ಕೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2024, 15:51 IST
Last Updated 23 ಫೆಬ್ರುವರಿ 2024, 15:51 IST
ಮಧುಶ್ರೀ
ಮಧುಶ್ರೀ   

ಚಾಮರಾಜನಗರ: ಸಿವಿಲ್ ನ್ಯಾಯಾಧೀಶರಾಗಿ ನಗರದ ರಾಮಸಮುದ್ರದ ಮಧುಶ್ರೀ ಆಯ್ಕೆಯಾಗಿದ್ದಾರೆ.

 ಚಾಮರಾಜನಗರ ಜಿಲ್ಲಾ ನ್ಯಾಯಾಲಯದಲ್ಲಿ ಎರಡು ವರ್ಷಗಳಿಂದ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದರು. ಸಿವಿಲ್ ನ್ಯಾಯಾಧೀಶರ ಪರೀಕ್ಷೆಯನ್ನು ಎರಡನೇ ಬಾರಿಗೆ ಎದುರಿಸುವ ಮೂಲಕ ಈಗ ನ್ಯಾಯಾಧೀಶರಾಗಿ ಆಯ್ಕೆಯಾಗಿದರು.

ಮೊದಲನೇ ಬಾರಿಯು ಸಹ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಸಂದರ್ಶನದಲ್ಲಿ ಹಿನ್ನಡೆ ಹೊಂದಿದ್ದರು.
ಆದರೂ, ಎರಡನೇ ಬಾರಿ ಮತ್ತೆ ಪ್ರಯತ್ನಿಸಿ ಈಗ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.