ಗುಂಡ್ಲುಪೇಟೆ: ಹಂದಿ ಸಾಯಿಸಲು ಇರಿಸಿದ್ದ ಸಿಡಿಮದ್ದು ಜಗಿದು ಕರುವಿನ ಮುಖಕ್ಕೆ ಗಂಭೀರ ಗಾಯಗಳಾಗಿರುವ ಘಟನೆ ತಾಲ್ಲೂಕಿನ ಮಾಲಾಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಹದೇವಸ್ವಾಮಿ ಎಂಬ ರೈತ ತಮ್ಮ ಜಮೀನಿನಲ್ಲಿ ಕರುವನ್ನು ಮೇಯಿಸುತ್ತಿದ್ದ ವೇಳೆ ಕರು ಆಹಾರ ಎಂದು ಭಾವಿಸಿ ಸಿಡಿಮದ್ದು ಜಗಿದಿದೆ. ಈ ವೇಳೆ ಸ್ಫೋಟಗೊಂಡು ಮುಖಕ್ಕೆ ಗಂಭೀರ ಗಾಯಗಳಾಗಿವೆ. ಸಿಡಿಮದ್ದು ಇರಿಸಿದ್ದ ಚಿಕ್ಕಎಲಚಟ್ಟಿ ಗ್ರಾಮದ ಜಬ್ಬರ್, ಪುಟ್ಟಯ್ಯ, ಅಣ್ಣೂರಿಕೇರಿ ಗ್ರಾಮದ ಗೋವಿಂದಶೆಟ್ಟಿ ಎಂಬ ಆರೋಪಿಗಳನ್ನು ರೈತರು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.
ತೆರಕಣಾಂಬಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.