ADVERTISEMENT

ಚಾಮರಾಜನಗರ | ವಿದ್ಯುತ್ ಸ್ಪರ್ಶ; ಇಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 5:07 IST
Last Updated 24 ಅಕ್ಟೋಬರ್ 2024, 5:07 IST
   

ಚಾಮರಾಜನಗರ: ತಾಲ್ಲೂಕಿನ ಚಂದಕವಾಡಿ ಹೋಬಳಿಯ ಅಯ್ಯನಪುರ ಗ್ರಾಮದಲ್ಲಿ ಬುಧವಾರ ರಾತ್ರಿ ವಿದ್ಯುತ್ ತಗುಲಿ ಇಬ್ಬರು ರೈತರು ಮೃತಪಟ್ಟಿದ್ದಾರೆ.

ಮಲ್ಲೇಶ್ (46), ನಾಗೇಂದ್ರ (46) ಮೃತರು.

ಭಾರಿ ಮಳೆಗೆ ಅಯ್ಯನಪುರ ರಸ್ತೆಯಲ್ಲಿ ಹಾದುಹೋಗಿರುವ ವಿದ್ಯುತ್ ಕಂಬದಿಂದ ತಂತಿ ಕಳಚಿ ರಸ್ತೆಗೆ ಬಿದ್ದಿದ್ದು, ರಾತ್ರಿ ಮಲ್ಲೇಶ್ ಹಾಗೂ ನಾಗೇಂದ್ರ ಬೈಕ್‌ನಲ್ಲಿ ಹೋಗುವಾಗ ರಸ್ತೆಯ ಮಧ್ಯೆ ನೇತಾಡುತ್ತಿದ್ದ ವಿದ್ಯುತ್ ತಂತಿಯೊಳಗೆ ಸಿಲುಕಿದ್ದಾರೆ.

ADVERTISEMENT

ಹೆಚ್ಚು ವಿದ್ಯುತ್ ಪ್ರವಹಿಸುವ ತಂತಿಯಾಗಿದ್ದರಿಂದ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.