ಚಾಮರಾಜನಗರ: ಸಂತೆಮರಹಳ್ಳಿ ಸಮೀಪದ ಬಸವಟ್ಟಿ ಗೇಟ್ ಬಳಿ ಬುಧವಾರ ಕೆಎಸ್ಆರ್ಟಿಸಿ ಬಸ್ ಹಾಗೂ ಸ್ಕೂಟರ್ ಮಧ್ಯೆ ಅಪಘಾತ ಸಂಭವಿಸಿದ್ದು ಸ್ಕೂಟರ್ನಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ.
ಮಹೇಶ್ (46) ಹಾಗೂ ಕಿಶೋರ್ (48) ಮೃತರು. ಬಸ್ ಟಿ.ನರಸೀಪುರದ ಕಡೆಯಿಂದ ಸಂತೆಮರಹಳ್ಳಿ ಕಡೆಗೆ ಬರುತ್ತಿತ್ತು. ಬೈಕ್ ಸವಾರರು ಸಂತೆಮರಹಳ್ಳಿಯಿಂದ ಕಮರಟ್ಟಿಗೆ ಹೋಗುವಾಗ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಘಪಾತದ ತೀವ್ರತೆಗೆ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮೃತರ ಶವಗಳನ್ನು ಸಿಮ್ಸ್ನಲ್ಲಿ ಇರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.