ಚೇಳೂರು: ಅಡುಗೆ ಅನಿಲದ ಸಿಲಿಂಡರ್ ತುಂಬಿಕೊಂಡು ಬಾಗೇಪಲ್ಲಿಯಿಂದ ಹೊರಟ್ಟಿದ್ದ ವಾಹನ ಮೂಗಿರೆಡ್ಡಿಪಲ್ಲಿ ಕ್ರಾಸ್ನ ಕೆರೆ ತಿರುವಿನಲ್ಲಿ ಭಾನುವಾರ ಹಳ್ಳಕ್ಕೆ ಉರುಳಿಬಿದ್ದಿದ್ದರಿಂದ ಚಾಲಕ ಮತ್ತು ಕ್ಲಿನರ್ಗೆ ಸಣ್ಣಪುಟ್ಟ ಗಾಯಗಳಾಗಿದೆ.
ಚಾಕವೇಲು ಗ್ರಾಮದ ವೆಂಕಟೇಶ್ ಅವರು ಬಾಗೇಪಲ್ಲಿಯಿಂದ ಅನಿಲ ತುಂಬಿಕೊಂಡು ಚಾಕವೇಲು ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಚೇಳೂರು ತಾಲ್ಲೂಕಿನ ಮೂಗಿರೆಡ್ಡಿಪಲ್ಲಿ ಕ್ರಾಸ್ನ ಕೆರೆ ತಿರುವಿನ ಬಳಿ ಏಕಾಏಕಿ ಎರಡು ದ್ವಿಚಕ್ರ ವಾಹನ ಅಡ್ಡ ಬಂದಿದೆ. ಅದನ್ನು ತಪ್ಪಿಸಲು ಹೋಗಿ ವಾಹನ ಪಲ್ಟಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.