ಬಾಗೇಪಲ್ಲಿ: ತಾಲ್ಲೂಕಿನಲ್ಲಿ ಶುಕ್ರವಾರ ರಾತ್ರಿ ಬಿದ್ದ ಗುಡುಗು ಮಿಂಚಿನ ಮಳೆಗೆ ಕಾರಕೂರು ಗ್ರಾಮದ ರೈತ ವೆಂಕಟಶಿವಪ್ಪ ಅವರ ಪಪ್ಪಾಯಿ ಗಿಡಗಳು ನೆಲಕ್ಕೆ ಬಿದ್ದಿದ್ದು, ಬೆಳೆ ನಷ್ಟವಾಗಿದೆ.
ರೈತ ವೆಂಕಟಶಿವಪ್ಪ 2 ಎಕರೆ ಹೊಲದಲ್ಲಿ ಪಪ್ಪಾಯಿ ಬೆಳೆದಿದ್ದಾರೆ. ಇದೀಗ ಮಳೆಗೆ ಪಪ್ಪಾಯಿ ಗಿಡಗಳು ನೆಲಕ್ಕೆ ಕಚ್ಚಿವೆ. ಕೊಳವೆ ಬಾಯಿಯಿಂದ ನೀರು ಹಾಯಿಸಿ ಪಪ್ಪಾಯಿ ಬೆಳೆದಿದ್ದೇನೆ. ಮಳೆಯಿಂದ ಪಪ್ಪಾಯಿ ಹಾಳಾಗಿದೆ. ₹1 ಲಕ್ಷ ನಷ್ಟ ಉಂಟಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.