ADVERTISEMENT

ಆಲ್ದೂರು: ರಸ್ತೆ ಗುರುಳಿದ ಮರದ ದಿಮ್ಮಿಗಳು

​ಪ್ರಜಾವಾಣಿ ವಾರ್ತೆ
Published 31 ಜನವರಿ 2024, 14:23 IST
Last Updated 31 ಜನವರಿ 2024, 14:23 IST
ಆಲ್ದೂರು ಪಟ್ಟಣದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿಯಲ್ಲಿ ಹಗ್ಗ ಸಡಿಲಗೊಂಡು ಲಾರಿಯಿಂದ ನೆಲಕ್ಕುರುಳಿರುವ ಮರದ ದಿಮ್ಮಿಗಳು
ಆಲ್ದೂರು ಪಟ್ಟಣದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿಯಲ್ಲಿ ಹಗ್ಗ ಸಡಿಲಗೊಂಡು ಲಾರಿಯಿಂದ ನೆಲಕ್ಕುರುಳಿರುವ ಮರದ ದಿಮ್ಮಿಗಳು   

ಆಲ್ದೂರು: ಪಟ್ಟಣದ ಮೂಲಕ ಹಾದು ಹೋಗಿರುವ ರಾಜ್ಯ ಹೆದ್ದಾರಿಯಲ್ಲಿ ಅಂಬೇಡ್ಕರ್ ವೃತ್ತದ ತಿರುವಿನಲ್ಲಿ ಟಿಂಬರ್ ಲಾರಿಯು ಚಿಕ್ಕಮಗಳೂರು ಮಾರ್ಗವಾಗಿ ಚಲಿಸುತ್ತಿರುವಾಗಲೇ ಗೂಟ ಮುರಿದು ಹಗ್ಗ ಸಡಿಲಗೊಂಡ ಕಾರಣ 5ಸಿಲ್ವರ್ ಮರದ ದಿಮ್ಮಿಗಳು ಹೆದ್ದಾರಿ ಮೇಲೆ ಉರುಳಿ ಬಿದ್ದಿದ್ದು, ದ್ವಿಚಕ್ರ ವಾಹನ ಸವಾರರು ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಈ ರೀತಿ ಬಾರಿ ಗಾತ್ರದ ಸರಕುಗಳನ್ನು ಸಾಗಿಸುವಾಗ ಮುಂಜಾಗ್ರತಾ ಕ್ರಮ ಸರಿಯಾಗಿದೆಯೇ ಎಂದು ಪರಿಶೀಲಿಸಿ, ವಾಹನ ಚಾಲನೆಗೆ ತರಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಮರದ ದಿಮ್ಮಿ ಸಾಧಿಸುತ್ತಿದ್ದ ಲಾರಿಯ ಮರದ ಗೂಟ ಮುರಿದು ಹಗ್ಗ ಸಡಿಲವಾಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT