ಆಲ್ದೂರು: ಸಮೀಪದ ಕೂದುವಳ್ಳಿ ಲೂರ್ದ್ ಮಾತೆ ದೇವಾಲಯದಲ್ಲಿ ಕ್ರಿಸ್ಮಸ್ ಅಂಗವಾಗಿ ಭಾನುವಾರ ರಾತ್ರಿ ವಿಶೇಷ ಬಲಿ ಪೂಜೆ ನಡೆಯಿತು.
ಗುರುಗಳಾದ ಎಡ್ವಿನ್ ಮೋನಿಸ್ ಹಬ್ಬದ ಪೂಜೆ ಸಲ್ಲಿಸಿ ಸಂದೇಶ ನೀಡಿದರು.
ಏಸುಕ್ರಿಸ್ತರಿಗೆ ಉನ್ನತ ಸ್ಥಾನ ನೀಡಿ ಜೀವನದಲ್ಲಿ ಅವರ ತತ್ವ, ಆದರ್ಶಗಳನ್ನು ಪಾಲಿಸಬೇಕು ಎಂದರು. ಧರ್ಮ ಕೇಂದ್ರದ ಗುರುಗಳಾದ ಡೆನ್ಜಿಲ್ ಲೋಬೊ ನೇತೃತ್ವ ವಹಿಸಿದ್ದರು. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.