ADVERTISEMENT

ಗಾಂಜಾ ಸೇವನೆ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2024, 14:36 IST
Last Updated 3 ಅಕ್ಟೋಬರ್ 2024, 14:36 IST

ತರೀಕೆರೆ: ಗಾಂಜಾ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತರೀಕೆರೆ ಪೊಲೀಸರು  ಕೋಡಿಕ್ಯಾಂಪ್, ಗಾಳಿಹಳ್ಳಿ, ಹಳಿಯೂರ ಗೇಟ್ ಬಳಿ ಮೂವರನ್ನು ಬಂಧಿಸಿದ್ದಾರೆ. ಕೋಡಿಕ್ಯಾಂಪ್‌ನ ಹರೀಶ ಬಿನ್ ಮೂಡಗಿರಿಯಪ್ಪ (32)  ಪವನ ಬಿನ್ ಶಿವಾಜಿರಾವ್ (33) ಜೀವನ ಬಿನ್ ರಂಜಿತ್ (19) ಬಂಧಿತ ಆರೋಪಿಗಳು.

ಗಾಂಜಾ ಸೇವಿಸಿ ಅಮಲಿನಲ್ಲಿದ್ದ ಇವರನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ತರೀಕೆರೆ ಪೊಲೀಸ್ ಠಾಣೆಯಲ್ಲಿ ಈ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

ತರೀಕೆರೆ ಉಪವಿಭಾಗದ ಡಿವೈಎಸ್‌ಪಿ ಹಾಲಮೂರ್ತಿ ರಾವ್ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ರ್‌ ರಾಮಚಂದ್ರ ನಾಯಕ,  ಪಿಎಸ್ಐ ನಾಗೇಂದ್ರ ನಾಯ್ಕ ಹಾಗೂ ಎನ್, ಬಸನಗೌಡ ಬಗಲಿ, ಆನಂದ್ ಡಿ. ಪಾವಸ್ಕರ್ , ದೇವೇಂದ್ರಪ್ಪ ರಾಥೋಡ್ ಹಾಗೂ ಸಿಬ್ಬಂದಿ ಪ್ರದೀಪ, ವೇಣು, ಧನಂಜಯ, ರಿಯಾಜ್, ರುದ್ರೇಶ, ಮಧು, ಕಲ್ಲೇಶ, ವಾಸು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.