ಕೊಟ್ಟಿಗೆಹಾರ: ಬಣಕಲ್ ನಜರೆತ್ ಶಾಲೆಯಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಕಾರ್ಯಾಗಾರ ನಡೆಯಿತು.
ಬಾಳೂರು ಠಾಣೆಯ ಸಬ್ ಇನ್ಸ್ಪೆಕ್ಟರ್ ದಿಲೀಪ್ ಕುಮಾರ್ ಕಾರ್ಯಾಗಾರ ಉದ್ಘಾಟಿಸಿದರು. ‘ವಿದ್ಯಾರ್ಥಿಗಳಿಗೆ ಓದಿನ ಜತೆಗೆ ಕಾನೂನಿನ ಅರಿವೂ ಅಗತ್ಯವಾಗಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೊಕ್ಸೊ) ಬಗ್ಗೆ ತಿಳಿದಿರಬೇಕು. ಗಾಂಜಾ, ಗುಟ್ಕಾ, ಮದ್ಯಪಾನದಂತ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಸಮಾಜ ನಿರ್ಮಾಣದಲ್ಲಿ ಭಾಗಿಯಾಗಬೇಕು’ ಎಂದರು.
ಪ್ರಾಂಶುಪಾಲೆ ಸಿಸ್ಟರ್ ಹಿಲ್ಡಾ ಲೊಬೊ, ಸಿಬ್ಬಂದಿ ಲವಕುಮಾರ್, ಶಿಕ್ಷಕ ಚಂದನ, ರೇಖಾ, ಅನುಶ್ರೀ, ಸಾಂಘವಿ, ರಜಿನಿ, ವಿನುತಾ ಸೆರಾವೋ, ರೇಷ್ಮಾ ಪಿರೇರಾ, ಸಿಸ್ಟರ್ ಅಮಲ್ ರಾಣಿ, ರುಕ್ಷವಿ, ಗಾಯತ್ರಿ ಅಬಿದಾ ನಸ್ರಿನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.