ADVERTISEMENT

ಚಿಕ್ಕಮಗಳೂರು ನಗರದಲ್ಲಿ ಆನೆ ಸುತ್ತಾಟ

​ಪ್ರಜಾವಾಣಿ ವಾರ್ತೆ
Published 9 ಮೇ 2024, 23:59 IST
Last Updated 9 ಮೇ 2024, 23:59 IST
ಚಿಕ್ಕಮಗಳೂರು ನಗರದಲ್ಲಿ ಸುತ್ತಾಡಿದ ಕಾಡಾನೆ
ಚಿಕ್ಕಮಗಳೂರು ನಗರದಲ್ಲಿ ಸುತ್ತಾಡಿದ ಕಾಡಾನೆ   

ಚಿಕ್ಕಮಗಳೂರು: ಆನೆಯೊಂದು ಚಿಕ್ಕಮಗಳೂರು ನಗರದ ಒಳಭಾಗಕ್ಕೆ ಬಂದು ಜಯನಗರದ ಬೀದಿಗಳಲ್ಲಿ ಸುತ್ತಾಡುವ ಮೂಲಕ ಆತಂಕ ಸೃಷ್ಟಿಸಿತು.

ಬೆಳಗಿನ ಜಾವ ವಾಯು ವಿಹಾರಕ್ಕೆ ಹೋಗುತ್ತಿದ್ದ ಜನರಿಗೆ ಆನೆ ಎದುರಾಗಿದೆ. ಕೂಡಲೇ ಎಲ್ಲರೂ ಮನೆ ಸೇರಿಕೊಂಡು ಆನೆ ಓಡಾಡುವ ವಿಡಿಯೊ ಮಾಡಿಕೊಂಡಿದ್ದಾರೆ. ಅರಣ್ಯ ಇಲಾಖೆಗೂ ಸುದ್ದಿ ಮುಟ್ಟಿಸಿದ್ದಾರೆ.

ಜಯನಗರದಿಂದ ಮತ್ತೆ ತೇಗೂರು ಕಡೆಗೆ ಹೋದ ಆನೆ ಈಗ ಕದ್ರಿಮಿದ್ರಿ ಅರಣ್ಯದಲ್ಲಿ ಸೇರಿದೆ. 10–12 ವರ್ಷದ ಮರಿಯಾನೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.

ADVERTISEMENT

‘ಆನೆಗಳ ಹಿಂಡಿನಲ್ಲಿದ್ದ ಮರಿಯಾನೆ ತಪ್ಪಿಸಿಕೊಂಡು ಊರಿನತ್ತ ಬಂದಿದೆ. ಸದ್ಯ ಸುರಕ್ಷಿತ ಜಾಗದಲ್ಲಿದ್ದು, ಅದನ್ನು ಹಿಂಡಿನತ್ತ ಓಡಿಸಲಾಗುವುದು. ಜನ ಆತಂಕಗೊಳ್ಳುವುದು ಬೇಡ’ ಎಂದು ಉಪಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.