ಕಳಸ: ಎನ್.ಆರ್.ಪುರದ ಮಹಿಳೆಯೊಬ್ಬರ ಶವ ಇಲ್ಲಿನ ಭದ್ರಾ ನದಿಯಲ್ಲಿ ಸೋಮವಾರ ಸಂಜೆ ಪತ್ತೆಯಾಗಿದೆ.
ಜುಲೈ 16ರಂದು ಎನ್.ಆರ್. ಪುರದಿಂದ ನಾಪತ್ತೆಯಾಗಿದ್ದ ಶಾರದಾ (55) ಅವರ ಶವ ಕಳಸದ ಹೊರವಲಯದ ಗೇರುತೋಟದ ಬಳಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಎನ್.ಆರ್.ಪುರ ಆಸ್ಪತ್ರೆಗೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೊರಟಿದ್ದ ಶಾರದಾ ನಾಪತ್ತೆಯಾಗಿದ್ದರು. 2 ದಿನಗಳ ಹಿಂದೆ ಕಳಸಕ್ಕೆ ಬಂದಿದ್ದರು ಎನ್ನಲಾಗಿತ್ತು. ಕಳಸ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.