ADVERTISEMENT

ಬಸವ ಜಯಂತಿ: ದುಬೈಗೆ ತೆರಳಿದ ತರಳಬಾಳು ಶ್ರೀ

​ಪ್ರಜಾವಾಣಿ ವಾರ್ತೆ
Published 11 ಮೇ 2024, 15:23 IST
Last Updated 11 ಮೇ 2024, 15:23 IST
ದುಬೈಗೆ ತೆರಳುವ ಮುನ್ನ ಸಿರಿಗೆರೆಯ ತರಳಬಾಳು ಬೃಹನ್ಮಠದ ಐಕ್ಯಮಂಟಪಕ್ಕೆ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಭೇಟಿ ನೀಡಿದರು
ದುಬೈಗೆ ತೆರಳುವ ಮುನ್ನ ಸಿರಿಗೆರೆಯ ತರಳಬಾಳು ಬೃಹನ್ಮಠದ ಐಕ್ಯಮಂಟಪಕ್ಕೆ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಭೇಟಿ ನೀಡಿದರು   

ಸಿರಿಗೆರೆ: ದುಬೈನಲ್ಲಿ ನಡೆಯಲಿರುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ತರಳಬಾಳು ಬೃಹನ್ಮಠದ  ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಶನಿವಾರ ಪ್ರಯಾಣ ಬೆಳೆಸಿದರು.

ದುಬೈನ ಯುಎಇ ಬಸವ ಸಮಿತಿಯ ಆಶ್ರಯದಲ್ಲಿ ಮೇ 19ರಂದು ಜೆ.ಎಸ್.‌ಎಸ್.ಪ್ರೈವೇಟ್‌ ಸ್ಕೂಲ್‌ ಸಭಾಂಗಣದಲ್ಲಿ‌ 17ನೇ ವರ್ಷದ ಬಸವ ಜಯಂತಿ ಕಾರ್ಯಕ್ರಮ ನಡೆಯಲಿದೆ.

ನಂತರ ಮಸ್ಕತ್‌ನಲ್ಲಿ ನಡೆಯುವ ಬಸವ ಜಯಂತಿ ಕಾರ್ಯಕ್ರಮದಲ್ಲೂ ಶ್ರೀಗಳು ಪಾಲ್ಗೊಳ್ಳುವರು.

ADVERTISEMENT

ಪ್ರಯಾಣಕ್ಕೂ ಮುನ್ನ ಶ್ರೀಗಳು ಮಠದ ಆವರಣದಲ್ಲಿರುವ ಐಕ್ಯಮಂಟಪಕ್ಕೆ ಭೇಟಿ ನೀಡಿ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಹಾಗೂ ಗುರುಶಾಂತ ಸ್ವಾಮೀಜಿ ಪ್ರತಿಮೆಗಳಿಗೆ ಪುಷ್ಪ ನಮನ ಸಲ್ಲಿಸಿದರು.

ವಕೀಲ ಜಿ.ಜಿ. ಸೋಮಶೇಖರಪ್ಪ, ಚಿತ್ರದುರ್ಗ ವಿಶ್ವಬಂಧು ಬ್ಯಾಂಕ್‌ ಅಧ್ಯಕ್ಷ ಜಿ.ಬಿ. ತೀರ್ಥಪ್ಪ, ಸಿರಿಗೆರೆ ವ್ಯವಸಾಯ ಸಂಘದ ಅಧ್ಯಕ್ಷ ಕೆ.ಎಂ. ಮಂಜುನಾಥ್‌, ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್.‌ ಮರುಳಸಿದ್ಧಯ್ಯ ಇದ್ದರು.

ನ್ಯಾಯಪೀಠಕ್ಕೆ ರಜೆ: ಶ್ರೀಗಳು ದುಬೈ ಮತ್ತು ಮಸ್ಕತ್‌ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದರಿಂದ ಮೇ 13 ಮತ್ತು ಮೇ 20ರಂದು ಸದ್ಧರ್ಮ ನ್ಯಾಯಪೀಠದ ಕಲಾಪಗಳು ನಡೆಯುವುದಿಲ್ಲ ಎಂದು ಮಠದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.