ADVERTISEMENT

ಕುಂಚಿಟಿಗ ಮಠದ ಆವರಣದಲ್ಲಿ ಕರಡಿ ಪ್ರತ್ಯಕ್ಷ: ಸಾರ್ವಜನಿಕರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 13:59 IST
Last Updated 5 ಜುಲೈ 2024, 13:59 IST
ಹೊಸದುರ್ಗದ ಕುಂಚಿಟಿಗ ಮಠದ ಆವರಣದಲ್ಲಿ ಕರಡಿ ಓಡಾಡುತ್ತಿರುವುದು
ಹೊಸದುರ್ಗದ ಕುಂಚಿಟಿಗ ಮಠದ ಆವರಣದಲ್ಲಿ ಕರಡಿ ಓಡಾಡುತ್ತಿರುವುದು   

ಹೊಸದುರ್ಗ: ಪಟ್ಟಣದ ಕುಂಚಿಟಿಗ ಮಠದ ಆವರಣದಲ್ಲಿ ಶುಕ್ರವಾರ ಮುಂಜಾನೆ ಕರಡಿ ನಿರ್ಭಯವಾಗಿ ಓಡಾಡಿದ್ದು, ಸಾರ್ವಜನಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

‘ಅರಣ್ಯ ಇಲಾಖೆ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ತಕ್ಷಣ ಕರಡಿಯನ್ನು ಸೆರೆಹಿಡಿಯಬೇಕು. ವರ್ಷದಿಂದ ಪದೇಪದೇ ಕರಡಿ ಕಾಣಿಸಿಕೊಳ್ಳುತ್ತಿದ್ದರೂ ಸೆರೆ ಹಿಡಿದಿಲ್ಲ. ವಾಯುವಿಹಾರಕ್ಕೆ ಹೋಗುವ ಭಕ್ತರು, ಸಾರ್ವಜನಿಕರು ತುಂಬಾ ಗಾಬರಿಗೊಂಡಿದ್ದಾರೆ. ಕೂಡಲೇ ಇಲಾಖೆ ಎಚ್ಚೆತ್ತು ಕರಡಿ ಸೆರೆಗೆ ಮುಂದಾಗಬೇಕು’ ಎಂದು ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT