ADVERTISEMENT

ಹಿರಿಯೂರು | ಲೈನ್‌ಮನ್ ಮೇಲೆ ಹಲ್ಲೆ: ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 15 ಮೇ 2024, 15:38 IST
Last Updated 15 ಮೇ 2024, 15:38 IST

ಹಿರಿಯೂರು: ನಿರಂತರ ಜ್ಯೋತಿಗೆ ಅಳವಡಿಸಿರುವ ಪರಿವರ್ತಕದಿಂದ ತೋಟದ ಮನೆಗೆ ಅನಧಿಕೃತವಾಗಿ ಪಡೆದುಕೊಂಡಿದ್ದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ ಲೈನ್‌ಮನ್ ಮೇಲೆ ಹಲ್ಲೆ ಸಂಬಂಧ ದೂರು ಐಮಂಗಲ ಠಾಣೆಯಲ್ಲಿ ಮಂಗಳವಾರ ದೂರು ದಾಖಲಾಗಿದೆ.

ಲೈನ್‌ಮನ್‌ ವಿಠ್ಠಲ್ ಸಿದ್ದರಾಮಪ್ಪ ಹಳಿಯಾಳ್ ನೀಡಿದ ದೂರು ಆಧರಿಸಿ ಭೂತಯ್ಯನಹಟ್ಟಿಯ ರಂಗಸ್ವಾಮಿ, ಯಲ್ಲಪ್ಪ ಹಾಗೂ ಬೆಳಗಟ್ಟ ಗ್ರಾಮದ ರಂಗಾಭೋವಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ವಿಠ್ಠಲ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.