ADVERTISEMENT

ಸಿರಿಗೆರೆ: ಋತುಸ್ರಾವದ ಹೊಟ್ಟೆ ನೋವು ತಾಳಲಾರದೆ ಬಾಲಕಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 13:49 IST
Last Updated 2 ಜುಲೈ 2024, 13:49 IST

ಸಿರಿಗೆರೆ: ಋತುಸ್ರಾವದ ಹೊಟ್ಟೆ ನೋವು ತಾಳಲಾರದೆ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಹಳವುದರ ಲಂಬಾಣಿ ಹಟ್ಟಿ ಗ್ರಾಮದಲ್ಲಿ ನಡೆದಿದೆ.

ಸಂಜನಾ (14) ಆತ್ಮಹತ್ಯೆ ಮಾಡಿಕೊಂಡಿರುವ ಬಾಲಕಿ. ಹಲವು ತಿಂಗಳುಗಳಿಂದ ಋತುಸ್ರಾಮದ ವೇಳೆ ತೀವ್ರ ಹೊಟ್ಟೆ ನೋವಿನ ಸಂಕಟ ಅನುಭವಿಸುತ್ತಿದ್ದಳು. ಅದಕ್ಕೆ ತೆಗೆದುಕೊಂಡಿದ್ದ ಔಷದೋಪಚಾರಗಳಿಂದ ಗುಣಮುಖಳಾಗಿದ್ದಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ.

ಬಾಲಕಿ ಕರಿಯಮ್ಮನಹಟ್ಟಿ ಗ್ರಾಮದ ಪ್ರೌಢಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದಳು. ತಂದೆ ಎರಡು ವರ್ಷಗಳ ಹಿಂದೆ ನಿಧನರಾಗಿದ್ದು, ತಾಯಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಯುವತಿ ಅಜ್ಜಿಯ ಮನೆಯಲ್ಲಿದ್ದುಕೊಂಡು ವ್ಯಾಸಂಗ ಮುಂದುವರಿಸಿದ್ದಳು.

ADVERTISEMENT

ಭರಮಸಾಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.