ADVERTISEMENT

ಹೊಸದುರ್ಗ | ಸಿಲಿಂಡರ್ ಸ್ಫೋಟ: ಎರಡು ಗುಡಿಸಲು ಭಸ್ಮ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2024, 15:52 IST
Last Updated 2 ಮಾರ್ಚ್ 2024, 15:52 IST
ಹೊಸದುರ್ಗದ ಕಂಚೀಪುರದಲ್ಲಿ ಬೆಂಕಿ ಅವಘಡದಿಂದ ಸುಟ್ಟು ಕರಕಲಾಗಿರುವ ಗುಡಿಸಲುಗಳು
ಹೊಸದುರ್ಗದ ಕಂಚೀಪುರದಲ್ಲಿ ಬೆಂಕಿ ಅವಘಡದಿಂದ ಸುಟ್ಟು ಕರಕಲಾಗಿರುವ ಗುಡಿಸಲುಗಳು   

ಹೊಸದುರ್ಗ: ತಾಲ್ಲೂಕಿನ ಮತ್ತೋಡು ಹೋಬಳಿಯ ಕಂಚೀಪುರ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಸಿಲಿಂಡರ್ ಸ್ಫೋಟಗೊಂಡು ಎರಡು ಗುಡಿಸಲುಗಳು ಸುಟ್ಟು ಭಸ್ಮವಾಗಿವೆ.  

ರಾಮಕೃಷ್ಣ ಮತ್ತು ಓಬಳೇಶ್ ಅವರಿಗೆ ಸೇರಿದ ಗುಡಿಸಲುಗಳು ಸುಟ್ಟಿದ್ದು, ಅದೃಷ್ಟವಶಾತ್ ನಿವಾಸಿಗಳು ಅಗ್ನಿ ಅವಘಡದಿಂದ ಪಾರಾಗಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಅವಘಡದಿಂದ ಗುಡಿಸಲಲ್ಲಿದ್ದ ₹45,000 ನಗದು, ದವಸ ಧಾನ್ಯಹಾಗೂ ದಿನನಿತ್ಯ ಬಳಕೆಯ ವಸ್ತುಗಳು ಬೆಂಕಿಯಲ್ಲಿ ಉರಿದುಹೋಗಿವೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.