ADVERTISEMENT

ಜೆಡಿಎಸ್ ಪರಾಜಿತ ಅಭ್ಯರ್ಥಿ ರವೀಂದ್ರಪ್ಪ ತೋಟದ ಮನೆ ಮೇಲೆ‌ ಲೋಕಾಯುಕ್ತ ದಾಳಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 5:31 IST
Last Updated 11 ಜುಲೈ 2024, 5:31 IST
   

ಚಿತ್ರದುರ್ಗ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ‌ ಪರಾಭವಗೊಂಡಿದ್ದ ಸಣ್ಣ ನೀರಾವರಿ ಇಲಾಖೆ ನಿವೃತ್ತ ಮುಖ್ಯ ಎಂಜಿನಿಯರ್ ಎಂ.ರವೀಂದ್ರಪ್ಪ ಮುಂಗುಸುವಳ್ಳಿ ಅವರ ತೋಟದ ಮನೆ ಸೇರಿ ವಿವಿಧೆಡೆ ಗುರುವಾರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು.

12 ತಂಡಗಳಲ್ಲಿ ಬಂದ ಪೊಲೀಸರು ವಿವಿಧೆಡೆ ದಾಳಿ ನಡೆಸಿ ಹುಡುಕಾಟ ನಡೆಸುತ್ತಿದ್ದಾರೆ. ಧರ್ಮಪುರದಿಂದ ಹೋಬಳಿ ಮುಂಗುಸುವಳ್ಳಿಯಲ್ಲಿರುವ ತೋಟದ ಮನೆ, ಐಮಂಗಲ ಬಾಟಲಿ ತಯಾರಿಕೆ ಕಾರ್ಖಾನೆ, ಚಿತ್ರದುರ್ಗದ ಮಾವನ ಮನೆ, ಕಚೇರಿ ಮೇಲೆ ದಾಳೆ ನಡೆಸಿ ಪರಿಶೀಲಿಸುತ್ತಿದ್ದಾರೆ.

2023ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಎರಡು ಬಾರಿ ಐಟಿ ದಾಳಿಯೂ ನಡೆದಿತ್ತು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.