ಶ್ರೀರಾಂಪುರ: ಕುರಿ ಹಿಂಡೊಂದು ರಸ್ತೆ ದಾಟುವ ವೇಳೆ ಲಾರಿ ಹರಿದು 10 ಕುರಿಗಳು ಸಾವಿಗೀಡಾಗಿರುವ ಘಟನೆ ಸಮೀಪದ ಮಾಳಪ್ಪನಹಳ್ಳಿ ಗೇಟ್ ಬಳಿ ಶನಿವಾರ ನಡೆದಿದೆ.
ಕುರಿಗಳು ಹಿರಿಯೂರು ತಾಲ್ಲೂಕು ಬಡಗೊಲ್ಲರಹಟ್ಟಿ ಗ್ರಾಮದ ಬಾಲರಾಜ್ ಅವರಿಗೆ ಸೇರಿದವು ಎಂದು ತಿಳಿದು ಬಂದಿದೆ.
ಮಾಳಪ್ಪನಹಳ್ಳಿ ಗೇಟ್ ಹಾಗೂ ಅರಲಹಳ್ಳಿ ಮಧ್ಯೆ ರಸ್ತೆ ಬದಿಯ ಹೊಲಗಳಲ್ಲಿ ಮೇಯುತ್ತಿದ್ದ ಕುರಿಗಳು ರಸ್ತೆ ದಾಟುವ ವೇಳೆ ಅರಲಹಳ್ಳಿ ಕಡೆಯಿಂದ ಬಂದ ಲಾರಿಯೊಂದು ಕುರಿಗಳ ಮೇಲೆ ಹರಿದಿದೆ. ಪರಿಣಾಮ 10 ಕುರಿಗಳು ಸ್ಥಳದಲ್ಲಿಯೇ ಮೃತಪಟ್ಟಿವೆ ಎಂದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.