ಮಂಗಳೂರು: ನಗರದ ಪೇಜ್ ಸಂಸ್ಥೆ ವತಿಯಿಂದ ವಿಶ್ವ ಅಲ್ಝೈಮರ್ ದಿನಾಚರಣೆಯನ್ನು ಸೆ.27ರಂದು ಬೆಳಿಗ್ಗೆ 9.30ರಿಂದ ಪುರಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ. ರಘುವೀರ್ ಸಿ.ವಿ ಹೇಳಿದರು.
ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಸೇರಿದಂತೆ ಅನೇಕ ಗಣ್ಯರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಮರೆವಿನ ಕಾಯಿಲೆಯಿಂದ ಬಳಲುತ್ತಿರುವವರಿಗೆ ಉಚಿತ ಚಿಕಿತ್ಸೆ, ಮನರಂಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.
ಪೇಜ್ ಸಂಸ್ಥೆಯ ಡಾ. ಪ್ರಭಾ ಅಧಿಕಾರಿ ಮಾತನಾಡಿ, ‘ಮೆರವಿನ ಕಾಯಿಲೆ ಬಂದ ಮೇಲೆ ಗುಣ ಮಾಡುವುದು ಕಷ್ಟ. ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡ ಹಂತದಲ್ಲಿ ಚಿಕಿತ್ಸೆ ನೀಡಿದಲ್ಲಿ, ಗುಣಪಡಿಸಲು ಸಾಧ್ಯವಿದೆ. ಮಂಗಳೂರು ನಗರದಲ್ಲಿ ಸುಮಾರು 5,000 ಮಂದಿ ಈ ಕಾಯಿಲೆಯಿಂದ ಬಳಲುತ್ತಿದ್ದು, ಸಾಮಾನ್ಯವಾಗಿ 75ರಿಂದ 90 ವರ್ಷ ವಯಸ್ಸಿನವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 75 ವರ್ಷದ ನಂತರ ಸಾಮಾನ್ಯವಾಗಿ ಮನುಷ್ಯ ದೈಹಿಕವಾಗಿ ದುರ್ಬಲನಾಗುವ ಕಾರಣ ಮನೆಯಲ್ಲೇ ಕುಳಿತು ಖಿನ್ನತೆ, ಶ್ರವಣ, ದೃಷ್ಟಿ ದೋಷ ಇಂತಹ ಸಮಸ್ಯೆಗಳು ಬರುತ್ತವೆ. ಇದನ್ನು ನಿರ್ಲಕ್ಷಿಸಿದರೆ, ಮರೆಗುಳಿತನ ಕಾಯಿಲೆ ಬರುವ ಸಾಧ್ಯತೆ ಇರುತ್ತದೆ’ ಎಂದರು.
ಜೆರಾಡಿನ್ ಡಿಸೋಜ, ಡಾ. ಮೋಹನ್ರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.