ಬಂಟ್ವಾಳ: ತಾಲ್ಲೂಕಿನಲ್ಲಿ ಎರಡು ದಿನಗಳಿಂದ ಮಳೆ ಇಳಿಮುಖವಾಗಿದೆ. ಬುಧವಾರ ಸ್ವಲ್ಪ ಹೊತ್ತು ಬಿಸಿಲು ಕಂಡುಬಂದಿತ್ತು. ಮಳೆ ಬಿಡುವು ನೀಡಿದ್ದರೂ, ಹಲವೆಡೆ ಹಾನಿ ಮುಂದುವರಿದಿದೆ.
ಪುದು ಗ್ರಾಮದ ಸುಜೀರು ಬದಿಗುಡ್ಡೆ ನಿವಾಸಿ ಆಸಿಯಮ್ಮ ಎಂಬುವರ ಮನೆ ಗೋಡೆ ಕುಸಿದಿದೆ. ಕುಟುಂಬಸ್ಥರನ್ನು ಸ್ಥಳಾಂತರಿಸಲಾಗಿದೆ. ಇದೇ ಗ್ರಾಮ ಬದಿಗುಡ್ಡೆ ನಿವಾಸಿ ಹಸೀನಾ ಎಂಬುವರ ಮನೆ ಮಾಡಿಗೆ ಹಾನಿಯಾಗಿದೆ. ಕೊಡಂಗೆ ನಿವಾಸಿ ಬಿ. ಫಾತಿಮ ರಹಿಮಾನ್ ಎಂಬುವರ ಮನೆಗೆ ಧರೆ ಕುಸಿದು ಬಿದ್ದು ಗೋಡೆಗೆ ಹಾನಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.