ADVERTISEMENT

ಮಂಗಳೂರು | ಬಿಎಸ್‌ಎನ್‌ಎಲ್‌ 25ನೇ ಸಂಸ್ಥಾಪನಾ ದಿನಾಚರಣೆ; ಜಾಥಾ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2024, 4:14 IST
Last Updated 2 ಅಕ್ಟೋಬರ್ 2024, 4:14 IST
ಬಿಎಸ್‌ಎನ್‌ಎಲ್‌ 25ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ನಗರದಲ್ಲಿ ಮಂಗಳವಾರ ಜಾಥಾ ನಡೆಯಿತು : ಪ್ರಜಾವಾಣಿ ಚಿತ್ರ
ಬಿಎಸ್‌ಎನ್‌ಎಲ್‌ 25ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ನಗರದಲ್ಲಿ ಮಂಗಳವಾರ ಜಾಥಾ ನಡೆಯಿತು : ಪ್ರಜಾವಾಣಿ ಚಿತ್ರ   

ಮಂಗಳೂರು: ಭಾರತ್ ಸಂಚಾರ್‌ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್‌) ಬೆಳ್ಳಿ ಹಬ್ಬ ಹಾಗೂ 25ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಸಂಸ್ಥೆಯ ಜಿಲ್ಲಾ ಕೇಂದ್ರ ಕಚೇರಿಯ ಆಶ್ರಯದಲ್ಲಿ ನಗರದಲ್ಲಿ ವಿಶೇಷ ಜಾಥಾ ನಡೆಯಿತು.

ಸಂಸ್ಥೆಯ ಜಿಲ್ಲಾ ಪ್ರಧಾನ ವ್ಯವಸ್ಥಾಪಕ ನವೀನ್‌ ಕುಮಾರ್ ಗುಪ್ತ ಪಾಂಡೇಶ್ವರದ ಬಿಎಸ್‌ಎನ್‌ಎಲ್ ಕಚೇರಿಯ ಆವರಣದಲ್ಲಿ ಜಾಥಾವನ್ನು ಉದ್ಘಾಟಿಸಿದರು.  ಸ್ಟೇಟ್‌ಬ್ಯಾಂಕ್‌, ಗಡಿಯಾರ ಗೋಪುರ, ಎ.ಬಿ.ಶೆಟ್ಟಿ ವೃತ್ತದ ಮಾರ್ಗವಾಗಿ ಸಾಗಿದ ಜಾಥಾ ಮತ್ತೆ ಬಿಎಸ್‌ಎನ್ಎಲ್‌ ಕಚೇರಿಗೆ ಮರಳಿತು.  ಜಾಥಾದಲ್ಲಿ ಹೆಜ್ಜೆ ಹಾಕಿದ ಸಂಸ್ಥೆಯ ಸಿಬ್ಬಂದಿ, ನಿವೃತ್ತ ಸಿಬ್ಬಂದಿ ಹಾಗೂ ವಿವಿಧ ಫ್ರಾಂಚೈಸಿಗಳ ಸಿಬ್ಬಂದಿ ಬಿಎಸ್‌ಎನ್‌ಎಸ್‌ ಸಾಧನೆಗಳನ್ನು ಬಿಂಬಿಸುವ ಫಲಕಗಳನ್ನು ಪ್ರದರ್ಶಿಸಿದರು.

ಉಪ ಪ್ರಧಾನ ವ್ಯವಸ್ಥಾಪಕ ಮುರುಗೇಶನ್‌ ಟಿ., ಸಹಾಯಕ ಪ್ರಧಾನ ವ್ಯವಸ್ಥಾಪಕ ರಾಜೇಶ್ ಕೆ.ಎಂ. ಸೇರಿದಂತೆ ಸಂಸ್ಥೆಯ ಮಂಗಳೂರು ಕಚೇರಿಯ ಎಲ್ಲ ಸಹಾಯಕ ಪ್ರಧಾನ ವ್ಯವಸ್ಥಾಪಕರು ಹಾಗೂ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.