ಕಾಸರಗೋಡು: ನಿಯಂತ್ರಣ ಕಳೆದುಕೊಂಡ ಖಾಸಗಿ ಬಸ್ ಮಗುಚಿ ಚಾಲಕ ಮೃತಪಟ್ಟು 55 ಮಂದಿ ಗಾಯಗೊಂಡ ಘಟನೆ ನಡೆದಿದೆ. ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.
ಮಂಗಳೂರಿನಿಂದ ಕಣ್ಣೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ರಾಷ್ಟ್ರೀಯ ಹೆದ್ದಾರಿಯ ಪೆರಿಯ ಚಾಲಿಂಗಾಲ್ ಮೊಟ್ಟ ಎಂಬಲ್ಲಿನ ತಿರುವಿನಲ್ಲಿ ಮಗುಚಿದೆ. ಚಾಲಕ, ಪಾರೆಕಟ್ಟೆ ವಿವೇಕಾನಂದ ನಗರದ ನಿವಾಸಿ ಚೇತನ್ ಕುಮಾರ್ (36) ಮೃತಪಟ್ಟವರು. ಬಸ್ ನಿರ್ವಾಹಕ ಪಯ್ಯನ್ನೂರು ನಿವಾಸಿ ಶಶಿಧರನ್, ಪ್ರಯಾಣಿಕ, ಕೋಳವಯಲ್ ಇಟ್ಟಮ್ಮಲ್ ನಿವಾಸಿ ಅಬ್ದುಲ್ ರಹಮಾನ್ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶಾಲಾ ಮಕ್ಕಳ ಸಹಿತ 53 ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಮೂರು ಅಗ್ನಿಶಾಮಕದಳದ ಸಿಬ್ಬಂದಿ ಗಾಯಾಳುಗಳನ್ನು ರಕ್ಷಿಸಿದರು. ಚೇತನ್ ಕುಮಾರ್ ಅವರು ಶಶಿಧರ-ಸುಮಾ ದಂಪತಿ ಪುತ್ರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.