ADVERTISEMENT

ಸುರತ್ಕಲ್: ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹ, ಜಾಥಾ

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 14:11 IST
Last Updated 1 ಜುಲೈ 2024, 14:11 IST
ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹದ ಅಂಗವಾಗಿ ಸುರತ್ಕಲ್ ಮೆಸ್ಕಾ೦ ವತಿಯಿಂದ ಸುರಕ್ಷತಾ ಜಾಥಾ ನಡೆಯಿತು
ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹದ ಅಂಗವಾಗಿ ಸುರತ್ಕಲ್ ಮೆಸ್ಕಾ೦ ವತಿಯಿಂದ ಸುರಕ್ಷತಾ ಜಾಥಾ ನಡೆಯಿತು   

ಸುರತ್ಕಲ್: ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹದ ಪ್ರಯುಕ್ತ, ವಿದ್ಯುತ್ ಸುರಕ್ಷತೆಯ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ಮೆಸ್ಕಾಂ ಸುರತ್ಕಲ್ ಉಪವಿಭಾಗದ ವತಿಯಿಂದ ಸೋಮವಾರ ರಸ್ತೆ ಜಾಥಾ ನಡೆಯಿತು.

ಮೆಸ್ಕಾಂ ಕಚೇರಿಯಿಂದ ಸುರತ್ಕಲ್ ಜಂಕ್ಷನ್‌ವರೆಗೆ ತೆರಳಿ ಗ್ರಾಹಕರಿಗೆ ವಿದ್ಯುತ್ ಸುರಕ್ಷತೆಯ ಬಗ್ಗೆ ಕರ ಪತ್ರ ಹಂಚಿ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಲಾಯಿತು.

ಮೆಸ್ಕಾಂನ ಸುರತ್ಕಲ್ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ರಾಜೇಶ್, ಸಹಾಯಕ ಎಂಜಿನಿಯರ್ ಸುಪ್ರೀತ್ ಸಾಲ್ಯಾನ್, ಶಾಖಾಧಿಕಾರಿಗಳಾದ ಪ್ರಕಾಶ್, ಸುಜಿತ್, ಜೊಸ್ಸಿ ಡಿಸಿಲ್ವ, ಸುರತ್ಕಲ್, ಮುಕ್ಕ, ಕಾಟಿಪಳ್ಳ ಶಾಖೆಯ ಪವರ್‌ಮನ್‌ಗಳು ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.