ADVERTISEMENT

ಜೈನ ಧರ್ಮದ ಅವಹೇಳನ ಆರೋಪ; ಜೈನ್‌ ಮಿಲನ್‌ನಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2024, 15:56 IST
Last Updated 18 ಸೆಪ್ಟೆಂಬರ್ 2024, 15:56 IST
ಜೈನ ಧರ್ಮ ನಿಂದಿಸಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಂಗಳೂರಿನಲ್ಲಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ಕೆ.ಅಭಯಚಂದ್ರ ಜೈನ್‌ ಮತಾನಾಡಿದರು, ಕೃಷ್ಣರಾಜ ಹೆಗ್ಡೆ, ಪುಷ್ಪರಾಜ ಜೈನ್‌, ಸುರೇಶ್‌ ಬಲ್ಲಾಳ್‌ ಮೊದಲಾದವರು ಭಾಗವಹಿಸಿದ್ದರು : ಪ್ರಜಾವಾಣಿ ಚಿತ್ರ
ಜೈನ ಧರ್ಮ ನಿಂದಿಸಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಂಗಳೂರಿನಲ್ಲಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ಕೆ.ಅಭಯಚಂದ್ರ ಜೈನ್‌ ಮತಾನಾಡಿದರು, ಕೃಷ್ಣರಾಜ ಹೆಗ್ಡೆ, ಪುಷ್ಪರಾಜ ಜೈನ್‌, ಸುರೇಶ್‌ ಬಲ್ಲಾಳ್‌ ಮೊದಲಾದವರು ಭಾಗವಹಿಸಿದ್ದರು : ಪ್ರಜಾವಾಣಿ ಚಿತ್ರ   

ಮಂಗಳೂರು: ‘ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ತಿಮರೋಡಿಯ ಕುಂಜರ್ಪ ಎಂಬಲ್ಲಿ ಸೆ. 8ರಂದು ಗಣೇಶೋತ್ಸವದ ಸಭೆಯಲ್ಲಿ ಮಹೇಶ್‌ ಶೆಟ್ಟಿ ತಿಮರೋಡಿ, ಜೈನ ಧರ್ಮದ ಅವಹೇಳನ ಮಾಡಿದ್ದಾರೆ’ ಎಂದು ಆರೋಪಿಸಿ ಭಾರತೀಯ ಜೈನ್ ಮಿಲನ್ ನೇತೃತ್ವದಲ್ಲಿ ಇಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.

‘ಜೈನ ಧರ್ಮವನ್ನು ನಿಂದಿಸಿದ ವ್ಯಕ್ತಿ ವಿರುದ್ಧ ಕ್ರಮವಾಗಿಲ್ಲ. ಈ  ಬಗ್ಗೆ ಧರ್ಮಸ್ಥಳ, ಬೆಳ್ತಂಗಡಿ ಹಾಗೂ ವೇಣೂರು ಪೊಲೀಸ್‌ ಠಾಣೆಗಳಿಗೆ ದೂರು ನೀಡಿದರೂ  ಎಫ್ಐಆರ್‌ ದಾಖಲಾಗಿಲ್ಲ’ಎಂದು ಪ್ರತಿಭಟನಕಾರರು ಅಸಮಾಧಾನ ವ್ಯಕ್ತಪಡಿಸಿದರು. ‘ನಮ್ಮ ಧರ್ಮವನ್ನು ನಿಂದಿಸಿದ ವ್ಯಕ್ತಿ ವಿರುದ್ಧ ಕ್ರಮವಾಗದಿದ್ದರೆ ತೀವ್ರ ಹೋರಾಟ ನಡೆಸಲಿದ್ದೇವೆ’ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಸಚಿವ ಅಭಯಚಂದ್ರ ಜೈನ್‌, ‘ಧರ್ಮ ನಿಂದನೆ ಮೂಲಕ ಜನರನ್ನು ಇನ್ನೊಂದು ಧರ್ಮದ ವಿರುದ್ಧ ಎತ್ತಿಕಟ್ಟುವುದಕ್ಕೆ ಸರ್ಕಾರ ಅವಕಾಶ ಕಲ್ಪಿಸಬಾರದು. ಶಾಂತಿ ಬಯಸುವ ಜೈನ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ವ್ಯಕ್ತಿ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಪ್ರಮುಖರಾದ ಸುದರ್ಶನ ಜೈನ್‌, ಪುಷ್ಪರಾಜ ಜೈನ್‌, ಕೃಷ್ಣರಾಜ ಹೆಗ್ಡೆ, ರತ್ನಾಕರ ಜೈನ್, ಹರ್ಷೇಂದ್ರ ಮಾಳ, ಸುರೇಶ್‌ ಬಲ್ಲಾಳ್‌, ಶ್ವೇತಾ ಜೈನ್‌, ಜಗದೀಶ ಅಧಿಕಾರಿ, ಬಾಹುಬಲಿ ಪ್ರಸಾದ್‌ ಮೊದಲಾದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.