ಕಾಸರಗೋಡು: ದೈಹಿಕ ಶಿಕ್ಷಣ ಶಿಕ್ಷಕಿ, ಬೇಡಗಂ ಚೇರಿಪ್ಪಾಡಿ ನಿವಾಸಿ ಪ್ರೀತಿ (27) ಎಂಬುವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿಗಳಾದ ಆಕೆಯ ಪತಿ, ವೆಸ್ಟ್ ಎಳೆರಿ ಮಾಂಗೋಡ್ ಪೋವಂಕರ ನಿವಾಸಿ ರಾಜೇಶ್ ಕೃಷ್ಣ (39) ಎಂಬಾತನಿಗೆ 9 ವರ್ಷ ಕಠಿಣ ಸಜೆ, ₹ 2ಲಕ್ಷ ದಂಡ, ಪತಿಯ ತಾಯಿ ಶ್ರೀಲತಾ (59) ಎಂಬುವರಿಗೆ 7 ವರ್ಷ ಕಠಿಣ ಸಜೆ, ₹ 2ಲಕ್ಷ ದಂಡವನ್ನು ಜಿಲ್ಲಾ ಹೆಚ್ಚುವರಿ ನ್ಯಾಯಾಲಯ (ಪ್ರಥಮ) ವಿಧಿಸಿದೆ.
2017 ಆ.18ರಂದು ಚೇರಿಪ್ಪಾಡಿಯ ಮನೆಯಲ್ಲಿ ಪ್ರೀತಿ ಅವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪತಿ ಮತ್ತು ಅತ್ತೆ ನಡೆಸುತ್ತಿದ್ದ ದೌರ್ಜನ್ಯದಿಂದ ಬೇಸರಗೊಂಡು ಪ್ರೀತಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ತನಿಖೆ ನಡೆಸಿದ್ದ ಬೇಡಗಂ ಪೊಲೀಸರು ವರದಿ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.