ADVERTISEMENT

ದೇರಳಕಟ್ಟೆ: ಅಡುಗೆ ಅನಿಲ ಸೋರಿಕೆ- ಬೆಂಕಿ ಅನಾಹುತ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2024, 14:48 IST
Last Updated 18 ಏಪ್ರಿಲ್ 2024, 14:48 IST
<div class="paragraphs"><p>ಉಲ್ಲಾಳ ಸಮೀಪದ ದೇರಳಕಟ್ಟೆಯಲ್ಲಿ ರಸ್ತೆಬದಿಯ ತಳ್ಳುಗಾಡಿಯಲ್ಲಿ ಹೊತ್ತಿಕೊಂಡ ಬೆಂಕಿ ನಂದಿಸುವ ಯತ್ನ</p></div>

ಉಲ್ಲಾಳ ಸಮೀಪದ ದೇರಳಕಟ್ಟೆಯಲ್ಲಿ ರಸ್ತೆಬದಿಯ ತಳ್ಳುಗಾಡಿಯಲ್ಲಿ ಹೊತ್ತಿಕೊಂಡ ಬೆಂಕಿ ನಂದಿಸುವ ಯತ್ನ

   

ಉಳ್ಳಾಲ (ದಕ್ಷಿಣ ಕನ್ನಡ): ಇಲ್ಲಿಗೆ ಸಮೀಪದ ದೇರಳಕಟ್ಟೆಯಲ್ಲಿ ರಸ್ತೆಬದಿಯಲ್ಲಿ ಇರಿಸಲಾದ 'ಸ್ವೀಟ್ ಕಾರ್ನರ್ ಸ್ಟಾಲ್' ಎಂಬ ತಳ್ಳುಗಾಡಿಯ ಅಡುಗೆ ಅನಿಲ ಸಿಲಿಂಡರ್ ನಲ್ಲಿ ಅನಿಲ ಸೋರಿಕೆ ಉಂಟಾಗಿ ಗುರುವಾರ ಸಂಜೆ ತಳ್ಳುಗಾಡಿಗೆ ಬೆಂಕಿ ಹೊತ್ತಿಕೊಂಡಿದೆ.

ಸ್ಟಾಲ್ ನಲ್ಲಿ ಬಶೀರ್ ಎಂಬವರು ವ್ಯಾಪಾರದಲ್ಲಿ ತೊಡಗಿದ್ದ ಸಂದರ್ಭ ಅನಿಲ ಸೋರಿಕೆ ಉಂಟಾಗಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣ ಸ್ಥಳದಲ್ಲಿದ್ದ ಗ್ರಾಹಕರು ಹಾಗೂ ಬಷೀರ್ ಓಡಿ ಪಾರಾದರು. ಸಾರ್ವಜನಿಕರು ಹೊಯ್ಗೆ ಎರಚಿ, ನೀರು ಹಾಯಿಸಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಅಷ್ಟರಲ್ಲಿ ತಳ್ಳುಗಾಡಿಯು ಭಾಗಶಃ ಸುಟ್ಟುಹೋಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.