ADVERTISEMENT

ಉಜಿರೆ | ಅಪಘಾತ: ಕಾರು ಚಾಲಕ ಸಾವು

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 4:48 IST
Last Updated 29 ಜೂನ್ 2024, 4:48 IST
   

ಉಜಿರೆ(ದಕ್ಷಿಣ ಕನ್ನಡ): ಇಲ್ಲಿನ ಕಾಲೇಜು ರಸ್ತೆಯಲ್ಲಿರುವ ವಿಭಜಕದ ಬೀದಿದೀಪದ ಕಂಬಗಳಿಗೆ ಕಾರುಡಿಕ್ಕಿಯಾಗಿ ಕಾರಿನ ಚಾಲಕ ಹಾಗೂ ಮಾಲೀಕ ಬೆಳ್ತಂಗಡಿಯ ಪ್ರಜ್ವಲ್ ನಾಯಕ್ (35) ಶನಿವಾರ ನಸುಕಿನಲ್ಲಿ ಮೃತಪಟ್ಟಿದ್ದಾರೆ.

ಡಿಕ್ಕಿಯ ರಭಸಕ್ಕೆ ಒಂದು ವಿದ್ಯುತ್ ಕಂಬ ಬುಡ ಸಮೇತ ಕಿತ್ತು ಬಿದ್ದಿದೆ.

ಮೃತ ಪ್ರಜ್ವಲ್ ನಾಯಕ್ ಬೆಳ್ತಂಗಡಿಯ ಪ್ರಜ್ವಲ್ ವಾಣಿಜ್ಯ ಸಂಕೀರ್ಣದ ಮಾಲೀಕರಾದ ಪ್ರಮೋದ್ ಆರ್ ನಾಯಕ್ ಅವರ ಪುತ್ರ. ಉಜಿರೆಯಲ್ಲಿ ಗೇಮಿಂಗ್ ಶಾಪ್ ನಡೆಸುತ್ತಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.