ಮಂಗಳೂರು: ಮಂಗಳೂರು ಜಂಕ್ಷನ್– ವಿಜಯಪುರ ಸ್ಪೇಷನ್ (ರೈ.ಸಂ.07377) ರೈಲಿಗೆ ಚಿಕ್ಕಮಗಳೂರು ಜಿಲ್ಲೆಯ ಬೀರೂರು ನಿಲ್ದಾಣದಲ್ಲಿ ನಿಲುಗಡೆ ಕಲ್ಪಿಸಲಾಗಿದೆ.
ಏ.14 ರಿಂದ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದ್ದು, ಇದು 6 ತಿಂಗಳು ಜಾರಿಯಲ್ಲಿ ಇರುತ್ತದೆ. ವಿಜಯಪುರದಿಂದ ಮಂಗಳೂರಿಗೆ ಬರುವ ರೈಲು ಬೆಳಿಗ್ಗೆ 4.13 ಕ್ಕೆ ಬೀರೂರು ನಿಲ್ದಾಣಕ್ಕೆ ಬರಲಿದ್ದು, 4.15ಕ್ಕೆ ನಿಲ್ದಾಣದಿಂದ ಹೊರಡಲಿದೆ.
ಮಂಗಳೂರು ಜಂಕ್ಷನ್–ವಿಜಯಪುರ ರೈಲು ರಾತ್ರಿ 10.20ಕ್ಕೆ ಬೀರೂರು ತಲುಪಲಿದ್ದು, 10.22ಕ್ಕೆ ಹೊರಡಲಿದೆ ಎಂದು ದಕ್ಷಿಣ ರೈಲ್ವೆ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.