ADVERTISEMENT

ಸುರತ್ಕಲ್ | ಮುಖ್ಯ ರಸ್ತೆಯಲ್ಲಿ ಹೊಂಡ: ವಾಹನ ಸಂಚಾರಕ್ಕೆ ತೊಂದರೆ

​ಪ್ರಜಾವಾಣಿ ವಾರ್ತೆ
Published 24 ಮೇ 2024, 4:34 IST
Last Updated 24 ಮೇ 2024, 4:34 IST
<div class="paragraphs"><p>ಹೊಂಡಗಳಿಂದ ತುಂಬಿದ ಮಧ್ಯ ರಸ್ತೆ</p></div>

ಹೊಂಡಗಳಿಂದ ತುಂಬಿದ ಮಧ್ಯ ರಸ್ತೆ

   

ಸುರತ್ಕಲ್: ‌ಮಧ್ಯ ಜಂಕ್ಷನ್‌ನಿಂದ 9ನೇ ಬ್ಲಾಕ್ ಗುರುನಗರ ಐಟಿಐವರೆಗಿನ ಮುಖ್ಯ ರಸ್ತೆ ಹೊಂಡಗಳಿದ್ದ ಕೂಡಿದ್ದು, ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ.

ರಸ್ತೆಯ ಒಂದು ಭಾಗ ಮಂಗಳೂರು ಮಹಾನಗರ ಪಾಲಿಕೆಗೆ ಸೇರಿದ್ದು, ಇನ್ನೊಂದು ಭಾಗ ಚೇಳೈರು ಗ್ರಾಮ ಪಂಚಾಯಿತಿಗೆ ಸೇರಿದೆ. ಈ ರಸ್ತೆಯು ಸಂಪೂರ್ಣವಾಗಿ ಹಾಳಾಗಿದ್ದು, ಡಾಂಬರು ರಸ್ತೆಯಲ್ಲಿ ದೊಡ್ಡ ಹೊಂಡಗಳು ಆಗಿವೆ. ದ್ವಿಚಕ್ರವಾಹನ ಸವಾರರು ಹೊಂಡ ತಪ್ಪಿಸುವ ವೇಳೆ ಬಿದ್ದು ಗಾಯಗೊಂಡಿದ್ದಾರೆ. ಸಮಸ್ಯೆ ನಿವಾರಿಸುವಂತೆ ಲೋಕೋಪಯೋಗಿ ಇಲಾಖೆಗೆ ಹಲವು ಬಾರಿ ಮನವಿ ನೀಡಲಾಗಿದೆ.

ADVERTISEMENT

ಶಾಸಕ ಉಮಾನಾಥ ಕೋಟ್ಯಾನ್ ಅವರು ರಸ್ತೆ ಸರಿಪಡಿಸಲು ಸೂಚಿಸಿದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ತಕ್ಷಣವೇ ಸಂಬಂಧಿಸಿದ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ತಪ್ಪಿದರೆ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಲು ಸ್ಥಳೀಯರು ನಿರ್ಧರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.