ADVERTISEMENT

ಬದಿಯಡ್ಕ | ಮನೆಗೆ ನುಗ್ಗಿದ ಕಳ್ಳರು; ಆಭರಣ ಕಳವು

​ಪ್ರಜಾವಾಣಿ ವಾರ್ತೆ
Published 18 ಜನವರಿ 2024, 13:56 IST
Last Updated 18 ಜನವರಿ 2024, 13:56 IST

ಬದಿಯಡ್ಕ: ಇಲ್ಲಿಗೆ ಸಮೀಪದ ಮುಗು ಕುಂಞಪದವು ಸ್ವಾತಿ ಮಂಜುನಾಥ ರೈ ಎಂಬವರ ಮನೆಯಿಂದ ಸುಮಾರು ₹8 ಲಕ್ಷ ಮೌಲ್ಯದ 23 ಪವನ್ ಚಿನ್ನಾಭರಣ ಮಂಗಳವಾರ ಕಳವಾಗಿದೆ. ಮನೆಯ ಸದಸ್ಯರು ಮುಗು ಕ್ಷೇತ್ರದ ಕಿರುಷಷ್ಠಿ ಉತ್ಸವಕ್ಕೆ ತೆರಳಿದಾಗ ಘಟನೆ ನಡೆದಿದೆ. ಮನೆಯ ಬಾಗಿಲು ಮುರಿದು ಒಳ ಪ್ರವೇಶಿಸಿದ ಕಳ್ಳರು ಕಪಾಟಿನಲ್ಲಿದ್ದ ಒಡವೆಗಳನ್ನು ಕದ್ದೊಯ್ದಿದ್ದಾರೆ. ಬದಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.