ADVERTISEMENT

ತೊಕ್ಕೊಟ್ಟು ಮೇಲ್ಸೇತುವೆಗೆ ಉರುಳಿದ ಮರ

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 13:49 IST
Last Updated 4 ಜುಲೈ 2024, 13:49 IST
ಅಶ್ವತ್ಥ ಮರದ ಕೊಂಬೆ ಬಿದ್ದಿರುವುದು
ಅಶ್ವತ್ಥ ಮರದ ಕೊಂಬೆ ಬಿದ್ದಿರುವುದು   

ಉಳ್ಳಾಲ: ತೊಕ್ಕೊಟ್ಟು ಮೇಲ್ಸೇತುವೆಯ ಸ್ವಾಮಿ ಕೊರಗಜ್ಜ ಕ್ಷೇತ್ರದ ಬಳಿಯ ಅಶ್ವತ್ಥ ಮರದ ರೆಂಬೆಯೊಂದು ರಸ್ತೆಗೆ ಉರುಳಿದೆ.

ರೆಂಬೆಯು ಉರುಳಿದ ಕ್ಷಣದಲ್ಲಿ ರಸ್ತೆಯಲ್ಲಿ ಖಾಸಗಿ ಶಾಲೆ ವಾಹನವೊಂದು ಚಲಿಸಿದ್ದು, ಕೂದಲೆಲೆ ಅಂತರದಲ್ಲಿ ವಿದ್ಯಾರ್ಥಿಗಳು ಪಾರಾಗಿದ್ದಾರೆ.

ಸ್ಥಳೀಯ ಆಟೊ ಪಾರ್ಕ್‌ನ ರಿಕ್ಷಾ ಚಾಲಕರು ಮತ್ತು ಕೊರಗಜ್ಜ ಸೇವಾ ಸಮಿತಿ ಸದಸ್ಯರು ರೆಂಬೆಯನ್ನು ಕಡಿದು ವಾಹನ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.