ನ್ಯಾಮತಿ: ತಾಲ್ಲೂಕಿನ ಬೆಳಗುತ್ತಿ– ಯರಗನಾಳ್ ಗ್ರಾಮಗಳ ಮಧ್ಯೆ ಸೇತುವೆ ತಿರುವಿನಲ್ಲಿ ಅಳೆತ್ತರದ ಗಿಡಗಂಟಿಗಳು ಬೆಳೆದು ಅಪಘಾತಕ್ಕೆ ಆಹ್ವಾನ ನೀಡುವಂತಿವೆ.
ಸೇತುವೆಯ ಅಕ್ಕಪಕ್ಕದಲ್ಲಿ ಗಿಡಗಂಟಿಗಳು ಬೆಳೆದಿರುವುದರಿಂದ, ತಿರುವಿನಲ್ಲಿ ಬರುವ ವಾಹನಗಳು ಕಾಣುವುದಿಲ್ಲ. ಅದರಲ್ಲೂ ರಾತ್ರಿ ಸಮಯದಲ್ಲಿ ಸೇತುವೆಯ ತಿರುವು ಇದೆ ಎಂಬುದು ಗೊತ್ತಾಗುವುದಿಲ್ಲ. ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಮತ್ತು ಲೋಕೋಪಯೋಗಿ ಇಲಾಖೆಯವರು ಗಮನಹರಿಸಿ ಸಂಚಾರ ಯೋಗ್ಯಗೊಳಿಸಲಿ.
– ಜಿ.ನಿಜಲಿಂಗಪ್ಪ, ಹಳದಪ್ಪ, ಕವಿರಾಜ, ಪ್ರಶಾಂತ, ವಾಹನ ಸವಾರರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.