ನ್ಯಾಮತಿ: ತಾಲ್ಲೂಕಿನ ಕುರುವ ತಾಂಡಾದಲ್ಲಿ ಶನಿವಾರ ಸಾಲದ ಹೊರೆಯಿಂದ ರೈತ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಮಲಾಬಾಯಿ (50) ಆತ್ಮಹತ್ಯೆ ಮಾಡಿಕೊಂಡವರು.
ಅವರಿಗೆ ಒಡೆಯರಹತ್ತೂರಿನಲ್ಲಿ 2 ಎಕರೆ ಜಮೀನು ಇದೆ. ಒಂದು ವರ್ಷದ ಹಿಂದೆ ಅಡಿಕೆ ತೋಟ ಮಾಡಿದ್ದರು. ಬೆಳೆ ಬೆಳೆಯಲು ಹಾಗೂ ಮಗಳ ಮದುವೆಗೆ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ₹ 50,000 ಹಾಗೂ ವೈಯಕ್ತಿಕವಾಗಿ ₹ 5.40 ಲಕ್ಷ ಸಾಲ ಮಾಡಿದ್ದರು.
‘ಸಮರ್ಪಕ ಮಳೆಯಾಗದ ಕಾರಣ ಫಸಲು ಬಂದಿರಲಿಲ್ಲ. ಇದರಿಂದ ನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಕಮಲಾಬಾಯಿ ಪುತ್ರ ದೂರು ನೀಡಿದ್ದಾರೆ.
ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.