ADVERTISEMENT

ಕಡರನಾಯಕನಹಳ್ಳಿ | ಸಾಲದ ಹೊರೆ: ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 16:11 IST
Last Updated 23 ಜೂನ್ 2024, 16:11 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಕಡರನಾಯಕನಹಳ್ಳಿ: ಸಮೀಪದ ಎಳೆಹೊಳೆ ಗ್ರಾಮದಲ್ಲಿ ಶನಿವಾರ ಸಾಲದ ಹೊರೆಯಿಂದ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗ್ರಾಮದ ಅಶೋಕ ಆತ್ಮಹತ್ಯೆ ಮಾಡಿಕೊಂಡವರು. ಮನೆಯ ಜವಾಬ್ದಾರಿ ವಹಿಸಿಕೊಂಡಿದ್ದ ಅವರು ಮನೆಯ ನಿರ್ವಹಣೆ, ಜಮೀನು ಉಳುಮೆ, ಟ್ರ್ಯಾಕ್ಟರ್ ಖರೀದಿಗೆ ಬ್ಯಾಂಕ್‌ನಲ್ಲಿ ₹ 4 ಲಕ್ಷ, ವೈಯಕ್ತಿಕವಾಗಿ ₹ 6 ಲಕ್ಷ ಸಾಲ ಮಾಡಿದ್ದರು.

ADVERTISEMENT

ಸಮರ್ಪಕ ಮಳೆಯಾಗದ ಕಾರಣ ಮೂರು ವರ್ಷಗಳಿಂದ ಬೆಳೆ ಬಂದಿರಲಿಲ್ಲ. ಇದರಿಂದ ನೊಂದು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಶೋಕ್‌ ಅವರ ತಂದೆ ದೂರು ನೀಡಿದ್ದಾರೆ.

ಹರಿಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.