ADVERTISEMENT

ಸವಳಂಗ ಪ್ರಾಥಮಿಕ ಪತ್ತಿನ ಸಂಘ: ನಿರ್ದೇಶಕರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2024, 14:27 IST
Last Updated 11 ಫೆಬ್ರುವರಿ 2024, 14:27 IST
ನ್ಯಾಮತಿ ತಾಲ್ಲೂಕು ಸವಳಂಗ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ 12 ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ವಿಜಯಿಯಾದವರನ್ನು ಗ್ರಾಮಸ್ಥರು ಸನ್ಮಾನಿಸಿದರು
ನ್ಯಾಮತಿ ತಾಲ್ಲೂಕು ಸವಳಂಗ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ 12 ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ವಿಜಯಿಯಾದವರನ್ನು ಗ್ರಾಮಸ್ಥರು ಸನ್ಮಾನಿಸಿದರು   

ಸವಳಂಗ (ನ್ಯಾಮತಿ): ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 5 ವರ್ಷದ ಆಡಳಿತ ಮಂಡಳಿಯ 12 ನಿರ್ದೇಶಕರ ಸ್ಥಾನಕ್ಕೆ ಭಾನುವಾರ ಚುನಾವಣೆ ನಡೆಯಿತು. ಈ ಪೈಕಿ ನಾಲ್ವರು ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 8 ಸ್ಥಾನಗಳಿಗೆ ಚುನಾವಣೆ ನಡೆಯಿತು.

ಚುನಾವಣೆಯಲ್ಲಿ ಎಂ.ಜಿ.ಕರಿಬಸಪ್ಪ ಮಾಚಿಗೊಂಡನಹಳ್ಳಿ, ಕೆ.ಕೆ.ರಮೇಶ ಕೊಡತಾಳು, ಎಂ.ರಾಜಪ್ಪ ಕೊಡತಾಳು, ಎಂ.ಜಿ.ಷಣ್ಮುಖಪ್ಪ ಮಾದಾಪುರ, ಡಿ.ಎಚ್.ಲೋಕಪ್ಪ ಕೊಡತಾಳು, ಯಶೋಧಮ್ಮ ಮಾದಾಪುರ, ಕೆ.ಎಸ್.ವೀರಮ್ಮ ಕೊಡತಾಳು, ಎಸ್.ಎನ್.ಶಾಂತನಾಯ್ಕ ಸವಳಂಗ ವಿಜಯಿಯಾದರು.

ಎ.ಷಣ್ಮುಖಪ್ಪ ಸವಳಂಗ, ಪ್ರಭುದೇವ ಸೋಗಿಲು, ರಂಗಪ್ಪ ಮಾದಾಪುರ, ಎನ್.ಸುರೇಶಚಾರಿ ಸೋಗಿಲು (ಅವಿರೋಧ) ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಕರ್ತವ್ಯ ನಿರ್ವಹಿಸಿದ ಕೆ.ಜಿ.ನವೀನಕುಮಾರ ಪ್ರಕಟಿಸಿದರು.

ADVERTISEMENT

ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಜಿ.ಗಣೇಶ ಮತ್ತು ಸಿಬ್ಬಂದಿ ಸಹಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.