ADVERTISEMENT

‘ಮೊದಲ ಉರ್ದು ಮಹಿಳಾ ಶಿಕ್ಷಕಿ ಫಾತಿಮಾ ಶೇಖ್ ಪ್ರೇರಣೆ’

ಹೊನ್ನಾಳಿ: ರಾಜ್ಯ ಉರ್ದು ಟೀಚರ್ಸ್ ಅಸೋಸಿಯೇಷನ್ ವತಿಯಿಂದ ಶೈಕ್ಷಣಿಕ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 15:35 IST
Last Updated 29 ಫೆಬ್ರುವರಿ 2024, 15:35 IST
ಹೊನ್ನಾಳಿಯ ಗುರುಭವನದಲ್ಲಿ ಗುರುವಾರ ನಡೆದ ಉರ್ದು ಟೀಚರ್ಸ್ ಕಾರ್ಯಾಗಾರವನ್ನು ಬಿಇಒ ಎಸ್.ಸಿ. ನಂಜರಾಜ್ ಉದ್ಘಾಟಿಸಿದರು
ಹೊನ್ನಾಳಿಯ ಗುರುಭವನದಲ್ಲಿ ಗುರುವಾರ ನಡೆದ ಉರ್ದು ಟೀಚರ್ಸ್ ಕಾರ್ಯಾಗಾರವನ್ನು ಬಿಇಒ ಎಸ್.ಸಿ. ನಂಜರಾಜ್ ಉದ್ಘಾಟಿಸಿದರು   

ಹೊನ್ನಾಳಿ: ದೇಶದ ಪ್ರಥಮ ಮಹಿಳಾ ಶಿಕ್ಷಕಿಯಾಗಿ ಸಾವಿತ್ರಿಬಾಯಿ ಫುಲೆ ಹೇಗೆ ಮಹಿಳೆಯರಿಗೆ ಶಿಕ್ಷಣ ಕೊಡಿಸುವಲ್ಲಿ ಪ್ರಮುಖರಾಗಿದ್ದರೋ ಅದೇ ರೀತಿ, ಮುಸ್ಲಿಂ ಸಮುದಯದ ಮಹಿಳೆಯರಿಗೆ ಶಿಕ್ಷಣ ಕೊಡಿಸುವಲ್ಲಿ ಪ್ರಥಮ ಮಹಿಳಾ ಶಿಕ್ಷಕಿಯಾಗಿ ಫಾತಿಮಾ ಶೇಖ್ ಇತರರಿಗೆ ಪ್ರೇರಣೆಯಾಗಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ. ನಂಜರಾಜ ಹೇಳಿದರು.

ರಾಜ್ಯ ಉರ್ದು ಟೀಚರ್ಸ್ ಅಸೋಸಿಯೇಷನ್, ಹೊನ್ನಾಳಿ ತಾಲ್ಲೂಕು ಘಟಕ ಮತ್ತು ಫಾತಿಮಾ ಶೇಖ್ ಮಹಿಳಾ ಶಿಕ್ಷಕಿಯರ ಸಂಘದ ಸಂಯುಕ್ತ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶೈಕ್ಷಣಿಕ ಕಾರ್ಯಾಗಾರ, ಪ್ರತಿಭಾ ಪುರಸ್ಕಾರ, ನಿವೃತ್ತ ಶಿಕ್ಷಕರಿಗೆ ಸನ್ಮಾನ, ಪ್ರಶಸ್ತಿ ಪ್ರದಾನ ಹಾಗೂ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮುಸ್ಲಿಂ ಸಮುದಾಯದ ಮಹಿಳೆಯರು ಶಿಕ್ಷಣದಲ್ಲಿ ತೀರಾ ಹಿಂದುಳಿದಿದ್ದ ಸಮಯದಲ್ಲಿ ಫಾತಿಮಾ ಶೇಖ್ ಅವರು ಎಲ್ಲ ಎಡರು ತೊಡರುಗಳನ್ನು ಎದುರಿಸಿ ಮಹಿಳೆಯರಿಗೆ ಶಿಕ್ಷಣ ಕೊಡುವಲ್ಲಿ ಯಶಸ್ವಿಯಾದರು. ಅವರಿಂದ ಪ್ರೇರಣೆ ಪಡೆದು ಮಹಿಳೆಯರು ಇಂದು ಶಿಕ್ಷಿತರಾಗುತ್ತಿದ್ದಾರೆ ಎಂದರು.

ADVERTISEMENT

ಉರ್ದು ಟೀಚರ್ಸ್ ಅಸೋಸಿಯೇಷನ್ ತಾಲ್ಲೂಕು ಘಟಕದ ಅಧ್ಯಕ್ಷ ಅಖಿಲ್ ಪಾಷಾ ಮಾತನಾಡಿ, ‘ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ಶಿಕ್ಷಕರು ಕೊಡಬೇಕು. ನಮ್ಮ ಮಾತೃಭಾಷೆ ಉರ್ದುವಾದರೂ, ನಾಡ ಭಾಷೆ ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಬಿಆರ್‌ಸಿ ಎಂ. ತಿಪ್ಪೇಶ್, ರಾಜ್ಯ ಸಂಪನ್ಮೂಲ ವ್ಯಕ್ತಿ ಹಿದಾಯತ್ ಉಲ್ಲಾ ಮಾತನಾಡಿದರು. ಶಿಕ್ಷಣ ಇಲಾಖೆಯ ರವಿಕುಮಾರ್, ಚಂದ್ರಶೇಖರ್, ಪ್ರಕಾಶ್‍ನಾಯ್ಕ, ಹೊನ್ನಾಳಿ ತಾಲ್ಲೂಕು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಷಹಜಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.