ಕಡರನಾಯ್ಕನಹಳ್ಳಿ: ಸಮೀಪದ ಹೊಳೆ ಸಿರಿಗೆರೆ ಕ್ರಾಸ್ ಬಳಿ ಔಷಧ ಬಾಟಲ್ಗಳ ರಾಶಿ ಕಂಡುಬಂದಿದೆ.
ಖಾಲಿ ಬಾಟಲ್ಗಳನ್ನು ಚೀಲದಲ್ಲಿ ತಂದು ಇಲ್ಲಿ ಸುರಿಯಾಗಿದೆ. ಗಾಜಿನ ಬಾಟಲ್ಗಳು ಒಡೆದು ಚೂರಾದರೆ ಇಲ್ಲಿ ಓಡಾಡುವವರಿಗೆ ತೊಂದರೆಯಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
‘ಇವು ಸರ್ಕಾರಿ ಆಸ್ಪತ್ರೆಗೆ ಸೇರಿದವುಗಳಲ್ಲ. ಯಾವುದೋ ಖಾಸಗಿ ವೈದ್ಯರಿಗೆ ಸಂಬಂಧಿಸಿವೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಅವುಗಳನ್ನು ಸಂಗ್ರಹಿಸಿದ್ದೇವೆ. ಹೀಗೆ ಎಲ್ಲೆಂದರಲ್ಲಿ ಔಷಧ ಬಾಟಲ್ಗಳನ್ನು ಎಸೆಯಬಾರದು’ ಎಂದು ಹೊಳೆ ಸಿರಿಗೆರೆ ವೈದ್ಯಾಧಿಕಾರಿ ಡಾಕ್ಟರ್ ಚೇತನ್ ಮತ್ತು ತಾಲೂಕು ಆರೋಗ್ಯ ನಿರೀಕ್ಷಕ ಎಂ ಉಮ್ಮಣ್ಣ ಹೇಳಿದ್ದಾರೆ.
‘ಇವು ಯಾವ ಕಂಪನಿಗೆ ಸೇರಿವೆ ಹಾಗೂ ಯಾವ ವೈದ್ಯರಿಗೆ ಸರಬರಾಜಾಗಿವೆ ಎಂಬುದನ್ನು ಪರಿಶೀಲಿಸಿ ಸೂಕ್ತ ಕ್ರಮಕ್ಕೆ ಶಿಫಾರಸು ಮಾಡಲಾಗುವುದು’ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.