ADVERTISEMENT

ಲಕ್ಷ್ಮಿಸಾಗರ: ತೋಟದ ಮನೆಯಲ್ಲಿ ಕಳವು

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 16:05 IST
Last Updated 17 ಜೂನ್ 2024, 16:05 IST

ಚನ್ನಗಿರಿ: ತಾಲ್ಲೂಕಿನ ಲಕ್ಷ್ಮಿಸಾಗರ ಗ್ರಾಮದ ತೋಟದ ಮನೆಯ ಬಾಗಿಲು ಮುರಿದು ವಿದ್ಯುತ್ ಪರಿಕರಗಳನ್ನು ಕಳವು ಮಾಡಿರುವ ಘಟನೆ ಭಾನುವಾರ ನಡೆದಿದೆ.

ಚನ್ನಗಿರಿ ಪಟ್ಟಣದ ನಿವಾಸಿ ಮಹಮದ್ ಫಾರ್ಬಿನ್ ಅಬ್ದುಲ್ ಅವರ ತೋಟ ಲಕ್ಷ್ಮಿಸಾಗರ ಗ್ರಾಮದಲ್ಲಿದ್ದು, ಭಾನುವಾರ ನಸುಕಿನ ವೇಳೆ ಕಳ್ಳರು ತೋಟದ ಮನೆಯ ಬಾಗಿಲು ಮುರಿದು ಹಾಕಿ, ಮನೆಯಲ್ಲಿದ್ದ ₹ 45,000 ಮೌಲ್ಯದ ಮೋಟಾರ್ ಹಾಗೂ ₹ 50,000 ಮೌಲ್ಯದ 950 ಅಡಿ ಉದ್ದದ ಕೇಬಲ್ ಅನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ದೂರು ನೀಡಿದ್ದಾರೆ.

ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.