ಸಂತೇಬೆನ್ನೂರು: ಇಲ್ಲಿನ ಕೋಟೆ ರಸ್ತೆಯಿಂದ ಆರಂಭಗೊಳ್ಳುವ ನಾಗೇನಹಳ್ಳಿ– ಮೆದಿಕೆರೆ ಸಂಪರ್ಕಿಸುವ ರಸ್ತೆಯಲ್ಲಿ ಹೆಜ್ಜೆ ಹೆಜ್ಜೆಗೂ ಗುಂಡಿಗಳು ಬಿದ್ದಿವೆ.
ಸುಮಾರು ಒಂದು ಕಿ.ಮೀ. ದೂರದವರೆಗೆ ಗುಂಡಿಗಳು ಬಿದ್ದಿದ್ದು, ಅವುಗಳನ್ನು ತಪ್ಪಿಸಿ ವಾಹನ ಚಾಲನೆ ಮಾಡುವುದು ದುಸ್ತರವಾಗಿದೆ. ಪ್ರತಿದಿನ ಶಾಲಾ ವಿದ್ಯಾರ್ಥಿಗಳು ಈ ದಾರಿಯಲ್ಲೇ ಸಾಗಬೇಕು. ರಸ್ತೆ ಪಕ್ಕ ಪಾದಚಾರಿಗಳಿಗೂ ಹೆಚ್ಚು ಜಾಗವಿಲ್ಲ. ನಿತ್ಯ ನೂರಾರು ದ್ವಿಚಕ್ರ ವಾಹನಗಳು, ಶಾಲಾ ಬಸ್ಗಳು, ಖಾಸಗಿ ವಾಹನಗಳು ಈ ದಾರಿಯಲ್ಲೇ ಕ್ರಮಿಸಬೇಕು. ಗ್ರಾಮಕ್ಕೆ ಹೊಂದಿಕೊಂಡಿರುವ ಈ ರಸ್ತೆಯನ್ನು ಶೀಘ್ರ ದುರಸ್ತಿ ಮಾಡಬೇಕು.
– ಕೆ.ಎಸ್.ವೀರೇಶ್ ಪ್ರಸಾದ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.