ADVERTISEMENT

ತಂದೆಯ ಸಾವಿನಿಂದ ನೊಂದು ಮಗ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 12 ಮೇ 2024, 16:21 IST
Last Updated 12 ಮೇ 2024, 16:21 IST

ಸಾಸ್ವೆಹಳ್ಳಿ: ಸಮೀಪದ ಚೀಲಾಪುರ ಗ್ರಾಮದ ಶಿವಕುಮಾರ್ (32) ಅವರು ತಮ್ಮ ತಂದೆಯ ಸಾವಿನಿಂದ ಬೇಸತ್ತು ಗುರುವಾರ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶಿವಕುಮಾರ್ ತಂದೆ ಚಂದ್ರನಾಯ್ಕ (65) ಗುರುವಾರ ಬೆಳಗ್ಗೆ ಮೃತಪಟ್ಟಿದ್ದರು.

ಶಿವಕುಮಾರ್‌ಗೆ ಎಂಟು ವರ್ಷಗಳ ಹಿಂದೆ ಕಬ್ಬು ಕಡಿಯುವಾಗ ಆಕಸ್ಮಿಕವಾಗಿ ಹೊಡೆತ ಬಿದ್ದು ಎಡಗೈ ತುಂಡಾಗಿತ್ತು. ಆಸ್ಪತ್ರೆ ಇನ್ನಿತರೆ ಖರ್ಚಿಗೆ ಹಲವು ಕಡೆ ಸಾಲ ಮಾಡಿದ್ದರು. ಅವಿವಾಹಿತರಾದ ಇವರಿಗೆ ತಂದೆಯೇ ಎಲ್ಲ ರೀತಿಯ ನೆರವು ನೀಡಿದ್ದರು. ಆದರೆ ಅವರ ನಿಧನದಿಂದ ಮುಂದಿನ ಜೀವನದ ಬಗ್ಗೆ ಆತಂಕ ಉಂಟಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಸಹೋದರ ರವಿಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.