ಹರಿಹರ: ‘ಯತ್ನಾಳ್ ಈಗಾಗಲೇ ಸಿಎಂ ಅಂದರೆ ಕಾಮಿಡಿ ಮುತ್ಯಾ ಆಗಿದ್ದಾರೆ, ಮುಂದೆ ದೇವರು ಇವರನ್ನು ಎಚ್ಎಂ ಅಂದರೆ ಹುಚ್ಚ ಮುತ್ಯಾ ಹಾಗೂ ಪಿಎಂ ಅಂದರೆ ಪಾಗಲ್ ಮುತ್ಯಾ ಕೂಡ ಮಾಡಲಿ’ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಇಲ್ಲಿನ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀ ವ್ಯಂಗ್ಯವಾಡಿದರು.
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ರವರು ಮಾಡಿದ ಟೀಕೆ ಬಗ್ಗೆ ಸೋಮವಾರ ಮಾಧ್ಯಮದವರಿಗೆ ಅವರು ಪ್ರತಿಕ್ರಿಯಿಸಿದರು.
ಒಬಿಸಿ ಮೀಸಲಾತಿ ಬೇಕು:
‘ವೀರಶೈವ ಸಮುದಾಯ ಕೆಲವು ಉಪಪಂಗಡಗಳಿಗೆ ಕೇಂದ್ರದ ಇತರೆ ಹಿಂದುಳಿದ ಸಮುದಾಯ (ಒಬಿಸಿ) ಮೀಸಲಾತಿ ಸಿಕ್ಕಿದೆ. ಆದರೆ, ಉಳಿದ ಪಂಗಡಗಳಿಗೆ ಆ ಮೀಸಲಾತಿ ಇನ್ನೂ ಸಿಕ್ಕಿಲ್ಲ, ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಮೀಸಲಾತಿ ಬೇಕಾಗಿದೆ’ ಎಂದರು.
‘ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಸಮುದಾಯಕ್ಕೆ ಸಾಮಾಜಿಕ ಮತ್ತು ರಾಜಕೀಯ ನ್ಯಾಯ ಕಲ್ಪಿಸುವ ಬಗ್ಗೆ ನಂಬಿಕೆ ಇದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.