ADVERTISEMENT

ನವಲಗುಂದ: ಆರೋಗ್ಯ ಇಲಾಖೆಯಿಂದ ಲಾರ್ವಾ ಸಮೀಕ್ಷೆ, ಡೆಂಗಿ ಜಾಗೃತಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 15:39 IST
Last Updated 22 ಜೂನ್ 2024, 15:39 IST
ನವಲಗುಂದ ಪಟ್ಟಣದ ವಾರ್ಡ್‌ 19ರಲ್ಲಿ ತಾಲ್ಲೂಕು ಅರೋಗ್ಯಾಧಿಕಾರಿ ಡಾ.ಎನ್.ಬಿ.ಕರ್ಲವಾಡ ಮತ್ತು ಸಿಬ್ಬಂದಿ  ಲಾರ್ವಾ ಸಮೀಕ್ಷೆ ನಡೆಸಿದರು
ನವಲಗುಂದ ಪಟ್ಟಣದ ವಾರ್ಡ್‌ 19ರಲ್ಲಿ ತಾಲ್ಲೂಕು ಅರೋಗ್ಯಾಧಿಕಾರಿ ಡಾ.ಎನ್.ಬಿ.ಕರ್ಲವಾಡ ಮತ್ತು ಸಿಬ್ಬಂದಿ  ಲಾರ್ವಾ ಸಮೀಕ್ಷೆ ನಡೆಸಿದರು   

ನವಲಗುಂದ: ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಮನೆ ಮನೆಗೆ ತರಳಿ ಲಾರ್ವಾ ಸಮೀಕ್ಷೆ ನಡೆಸುವ ಜತೆಗೆ ಡೆಂಗಿ ಕುರಿತು ಜಾಗೃತಿ ಮೂಡಿಸಿದರು.  

ಮನೆಯಲ್ಲಿ ಡ್ರಮ್‌, ಇತರ ವಸ್ತುಗಳಲ್ಲಿ ಬಹಳ ದಿನಗಳಿಂದ ಸಂಗ್ರಹಿಸಿದ ನೀರನ್ನು ಹೊರಗೆ ಚೆಲ್ಲಿಸಿದರು.

ತೆಂಗಿನ ಚಿಪ್ಪು, ಟೈರ್‌, ಸಿಮೆಂಟ್‌ ತೊಟ್ಟಿ ಒಡೆದ ಬಕೆಟ್‌, ಕೊಡಗಳಲ್ಲಿ ನೀರು ನಿಲ್ಲದಂತೆ ಜಾಗ್ರತೆ ವಹಿಸಬೇಕು. ಜ್ವರ ಬಂದರೆ ಕೂಡಲೇ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.

ADVERTISEMENT

ತಾಲ್ಲೂಕು ಅರೋಗ್ಯಾಧಿಕಾರಿ ಡಾ.ಎನ್.ಬಿ.ಕರ್ಲವಾಡ, ಡಾ.ಅವಿನಾಶ ಎಸ್.ಜಿ., ರಮೇಶ್ ಹುಬ್ಬಳ್ಳಿ, ಸುಭಾಸ್ ಮಂಗಳಿ, ಶರಣಪ್ಪ ಕಡ್ಲೆಬಿಷ್ಠಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.